ಬಿಹಾರ ವಿಧಾನಸಭೆಯಲ್ಲಿ `ವಂದೇ ಮಾತರಂ’ ಹೇಳಲು ಎಂ.ಐ.ಎಂ.ನ ಶಾಸಕರಿಂದ ವಿರೋಧ !
|
* ಯಾರಿಗೆ ನಿಜವಾದ ಅರ್ಥದಲ್ಲಿ ಈ ದೇಶದ ಭೂಮಿಯ ಮೇಲೆ ಪ್ರೀತಿ ಇದೆಯೋ ಮತ್ತು ಅದನ್ನು ತನ್ನದೆಂದು ತಿಳಿದುಕೊಳ್ಳುತ್ತಾರೋ, ಅವರು ಎಂದಿಗೂ `ವಂದೇ ಮಾತರಂ’ಗೆ ವಿರೋಧಿಸುವುದಿಲ್ಲ; ಆದರೆ ಯಾರು ವಿರೋಧಿಸುತ್ತಿದ್ದಾರೆ, ಅವರು ಈ ಭೂಮಿಯ ಮೇಲೆ ಎಷ್ಟೇ ಪ್ರೀತಿಯನ್ನು ತೋರ್ಪಡಿಸಿದರೂ ಅದು ಬರಿ ಕಪಟವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು * ದೇಶದ ಮತಾಂಧರು ಧರ್ಮದ ಹೆಸರನ್ನು ಮುಂದಿಟ್ಟುಕೊಂಡು `ವಂದೇ ಮಾತರಂ’ ಹೇಳಲು ಸುತ್ತಲೇ ಇದ್ದಾರೆ. ಅವರಿಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ವಿರೋಧಿಸುವುದಿಲ್ಲ ಅಥವಾ ಅವರಿಗೆ `ವಂದೇ ಮಾತರಂ’ ಹೇಳಲು ಹೇಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು |

ಪಾಟಲಿಪುತ್ರ (ಬಿಹಾರ) – ಬಿಹಾರದ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನವು ಡಿಸೆಂಬರ್ 4 ರಂದು ಮುಕ್ತಾಯಗೊಂಡಿತು. ಆ ಸಮಯದಲ್ಲಿ `ವಂದೇ ಮಾತರಂ’ ಈ ರಾಷ್ಟ್ರೀಯ ಗೀತೆಯಿಂದ ಅಧಿವೇಶನದ ಮುಕ್ತಾಯ ಮಾಡುವಾಗ ಅಸದುದ್ದಿನ್ ಓವೈಸಿ ಇವರ ಎಂ.ಐ.ಎಂ. ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. `ವಂದೇ ಮಾತರಂ’ ಗೀತೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಸಂವಿಧಾನದಲ್ಲಿ ಹೀಗೆ ಎಲ್ಲೋ ಬರೆದಿಲ್ಲ. ಇದು ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಈ ಮೊದಲು ಸದನದಲ್ಲಿ ಈ ಗೀತೆ ಎಂದೂ ಹಾಡಲಿಲ್ಲ. ಈಗ ಇದು ಒಂದು ಹೊಸ ಪರಂಪರೆ ಆರಂಭಿಸಿದ್ದಾರೆ. ಅದರ ಅವಶ್ಯಕತೆ ಏನೂ ಇರಲಿಲ್ಲ’, ಇಂತಹ ಶಬ್ದಗಳಲ್ಲಿ ಎಂ.ಐ.ಎಂ.ನ ಶಾಸಕ ಅಖ್ತರುಲ್ ಇಮಾನ್ ಇವರು `ವಂದೇ ಮಾತರಂ’ಗೆ ವಿರೋಧಿಸಿದರು.
विधायक अख्तरुल इमान ने कहा कि संविधान में कहीं भी नहीं लिखा है कि राष्ट्र गीत गाना अनिवार्य है | #Bihar | @rohit_manas https://t.co/NJjrf7a2g6
— AajTak (@aajtak) December 4, 2021
ಇಮಾನ್ ತಮ್ಮ ಮಾತನ್ನು ಮುಂದುವರೆಸುತ್ತಾ, ದೇಶದ ಸಂವಿಧಾನದಲ್ಲಿ ಪ್ರೇಮ ಮತ್ತು ಸಹೋದರತೆಯ ಉಲ್ಲೇಖವಿದೆ. ಅದರಲ್ಲಿ ಎಲ್ಲಾ ಧರ್ಮಗಳು ಗೌರವಿಸುವಂತೆ ಉಲ್ಲೇಖವಿದೆ; ಆದ್ದರಿಂದ ನಾನು `ವಂದೇ ಮಾತರಂ’ ಹಾಡಿಲ್ಲ ಮತ್ತು ಎಂದಿಗೂ ಹಾಡುವುದಿಲ್ಲ; ಆದರೆ ಇದರಿಂದ ನಮ್ಮ ದೇಶಭಕ್ತಿಯ ಬಗ್ಗೆ ಯಾರು ಪ್ರಶ್ನೆ ಚಿಹ್ನೆಯನ್ನು ಎತ್ತಲು ಸಾಧ್ಯವಿಲ್ಲ. ನಮಗೆ ಈ ದೇಶದ ಮೇಲೆ ನಿಷ್ಠೆ ಇದ್ದು ಯಾರು ನಮ್ಮ ಮೇಲೆ `ವಂದೇ ಮಾತರಂ’ ಹಾಡಲು ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಎಂ.ಐ.ಎಂ.ಗೆ ದೇಶವನ್ನು ತಾಲಿಬಾನ್ ಮಾಡುವುದಿದೆ ! – ಭಾಜಪ
ಎಂ.ಐ.ಎಂ.ನ ಶಾಸಕರ ಈ ನಿಲುವು ತಾಲಿಬಾನ್ ಪದ್ಧತಿಯಾಗಿದೆ. ಅವರಿಗೆ ಈ ದೇಶವನ್ನೂ `ತಾಲಿಬಾನ್’ ಮಾಡುವುದಿದೆ. ಜಿಹಾದಿ ಮತ್ತು ಜಾತ್ಯತೀತ ವ್ಯಕ್ತಿಗಳಿಂದ ಇದಕ್ಕಿಂತ ಹೆಚ್ಚೇನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರಿಗೆ ಈ ದೇಶದ ಮೇಲಾಗಲಿ ಅಥವಾ ಈ ದೇಶದ ಪರಂಪರೆಯ ಮೇಲಾಗಲಿ ಯಾವುದೇ ಪ್ರೇಮವಿಲ್ಲ, ಎಂದು ಭಾಜಪದ ಶಾಸಕ ಹರಿಭೂಷಣ ಠಾಕೂರ ಇವರು ಈಮಾನ್ ಇವರನ್ನೂ ಟೀಕಿಸಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ