೫ ವರ್ಷದ ಮಗುವಿನ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ

ಇಂತಹ ಅಪರಾಧಿಗಳಿಗೆ ಇದೇ ಶಿಕ್ಷೆ ಯೋಗ್ಯವಾಗಿದೆ ! ಈ ಶಿಕ್ಷೆಯು ತಕ್ಷಣ ಜಾರಿಯಾಗುವುದೂ ಅಷ್ಟೇ ಆವಶ್ಯಕತೆ ಇದೆ !

ಝಜ್ಜರ (ಹರಿಯಾಣಾ) – ಇಲ್ಲಿಯ ೫ ವರ್ಷದ ಮಗುವಿನ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದ ವಿನೋದ ಊರ್ಫ್ ಮುನ್ನಾ ಇವನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ. ೨೦ ಡಿಸೆಂಬರ್ ೨೦೨೦ ರಂದು ರಾತ್ರಿ ವಿನೋದ್ ಇವನು ಮಗುವಿನ ತಂದೆಯನ್ನು ಕಟ್ಟಿಹಾಕಿ ಮಗುವನ್ನು ಮನೆಯಿಂದ ಅಪಹರಣ ಮಾಡಿ ಆಕೆಯ ಮೇಲೆ ಬಲಾತ್ಕಾರ ನಡೆಸಿ ಆಕೆಯ ಹತ್ಯೆ ಮಾಡಿದ್ದನು. ವಿನೋದನ ಮೇಲೆ ಇಬ್ಬರು ಪೊಲೀಸರ ಹತ್ಯೆಯ ಆರೋಪವೂ ಇದೆ. (ಹಾಗಾದರೆ ಆರೋಪಿ ಮೇಲೆ ಮೊದಲಿನಿಂದಲೇ ಇಂತಹ ಗಂಭೀರ ಆರೋಪ ದಾಖಲಾಗಿದ್ದರೆ ಆತನನ್ನು ಕಾರಾಗೃಹದಲ್ಲಿ ಇರಿಸುವ ಬದಲು ಆತ ಹೊರಗೆ ಹೇಗೆ ಇದ್ದನು ? ಅವನಿಗೆ ಜಾಮೀನು ಸಿಕ್ಕಿದರೆ, ಇಂತಹ ಅಪರಾಧಿ ವೃತ್ತಿಯ ವ್ಯಕ್ತಿಗೆ ಜಮೀನು ನೀಡಲು ಪೋಲಿಸರು ವಿರೋಧಿಸಲಿಲ್ಲವೇ ? ಇದು ಜನರಿಗೆ ತಿಳಿಯಬೇಕು ! – ಸಂಪಾದಕರು)