ತಿಹಾರ ಸೆರೆಮನೆಯ ೫ ಪೊಲೀಸ್ ಅಧಿಕಾರಿಗಳಿಗೆ ೨೦೦ ಕೋಟಿ ರೂಪಾಯಿಯ ವಂಚನೆ ಪ್ರಕರಣದಲ್ಲಿ ಬಂಧನ !

ಸೆರೆಮನೆಯಲ್ಲಿನ ಆರೋಪಿಗೆ ವಂಚನೆಗಾಗಿ ಸಹಾಯ ಮಾಡಿದ್ದರು !

ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಎಂದು ಜನರಿಗೆ ಅನಿಸುತ್ತದೆ !

ನವ ದೆಹಲಿ – ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ೨೦೦ ಕೋಟಿ ರೂಪಾಯಿ ವಂಚನೆಯ ಪ್ರಕರಣದಲ್ಲಿ ತಿಹಾರ್ ಸೆರೆಮನೆಯ ೫ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ೨ ಸೆರೆಮನೆಯ ಅಧೀಕ್ಷಕ, ೨ ಉಪಅಧೀಕ್ಷಕ ಮತ್ತು ಒಬ್ಬ ಸಹಾಯಕ ಅಧೀಕ್ಷಕರು ಒಳಗೊಂಡಿದ್ದಾರೆ. ಈ ಸೆರೆಮನೆಯಲ್ಲಿ ಬಂಧಿಸಲಾದ ಸುಕೇಶ ಚಂದ್ರಶೇಖರ ಈತ ಸೆರೆಮನೆಯಲ್ಲಿದ್ದುಕೊಂಡೇ ಉದ್ಯಮಿ ಶಿವಿಂದರ ಸಿಂಹ ಇವರ ಪತ್ನಿ ಅದಿತಿ ಸಿಂಹ ಇವರ ೨೦೦ ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣದಲ್ಲಿ ಆತನಿಗೆ ಈ ಮೇಲಿನ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರಿಂದ ಅವರನ್ನು ಬಂಧಿಸಲಾಗಿದೆ.