ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ

ಅಗರ್ತಲಾ (ತ್ರಿಪುರಾ) – ಉತ್ತರ ತ್ರಿಪುರಾ ಜಿಲ್ಲೆಯ ಚಮಟಿಲ್ಲಾ ಪ್ರದೇಶದ ರೋವಾ ಬಜಾರ್ನಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಆಯೋಜಿಸಿದ್ದ ಆಂದೋಲನದಲ್ಲಿ ಜನಸಮೂಹದಿಂದ ಒಂದು ಮಸೀದಿ ಮತ್ತು ಮುಸಲ್ಮಾನರ ಮೂರು ಮನೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಭದ್ರತಾ ಪಡೆಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ಈ ಆಂದೋಲನವನ್ನು ಮಾಡಲಾಗಿತ್ತು.
Cases registered, forces deployed after mosque, shops vandalised in Tripura: Cops https://t.co/DFJXpZTYVp
— Hindustan Times (@HindustanTimes) October 27, 2021
ಈ ಬಗ್ಗೆ ಭಾಜಪದ ವಕ್ತಾರ ನಬೆಂದೂ ಭಟ್ಟಾಚಾರ್ಯ ಇವರು ಮಾತನಾಡುತ್ತಾ, ‘ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.’ ಎಂದು ಹೇಳಿದರು. ಮತ್ತೊಂದೆಡೆ ಮಾಕ್ರ್ಸ್ವಾದಿ ಕಮ್ಯುನಿಸ್ಟ್ ಪಕ್ಷವು ಘಟನೆಯನ್ನು ಖಂಡಿಸುತ್ತಾ ಸಂತ್ರಸ್ತರಿಗೆ ಸೂಕ್ತವಾದ ನಷ್ಟಪರಿಹಾರ ನೀಡುವಂತೆ ಒತ್ತಾಯಿಸಿದೆ. (ಕೇರಳದಲ್ಲಿ ಮತ್ತು ದೇಶದ ಇತರೆಡೆಗಳಲ್ಲಿ ಮತಾಂಧರಿಂದ ದಾಳಿಗಳು ನಡೆಯುತ್ತದೆಯೋ, ಆಗ ಸಿಪಿಐ (ಎಂ) ಈ ರೀತಿ ಒತ್ತಾಯಿಸುತ್ತದೆಯೇ ? ಅಥವಾ ‘ಮಾನವಾಧಿಕಾರದ ಹಕ್ಕುಗಳು ಕೇವಲ ಮತಾಂಧರಿಗೆ ಮಾತ್ರ ಇರುತ್ತವೆ ಮತ್ತು ಹಿಂದೂಗಳಿಗಿರುವುದಿಲ್ಲ’ ಎಂದು ಮಾಕಪಗೆ ಅನಿಸುತ್ತಿದೆಯೇ ? `ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಸಿಪಿಐ (ಎಂ) ಒಂದೂ ಸಲವೂ ಆಂದೋಲನವನ್ನು ಏಕೆ ನಡೆಸಲಿಲ್ಲ ಹಾಗೂ ಮತಾಂಧರನ್ನು ಏಕೆ ಖಂಡಿಸಲಿಲ್ಲ ?’, ಇದಕ್ಕೆ ಅವರು ಉತ್ತರಿಸಬೇಕು ! – ಸಂಪಾದಕರು)
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed