ಸನಾತನವು ಅದ್ಭುತವಾದ ಕಾರ್ಯ ಮಾಡುತ್ತಿದೆ ! – ಶ್ರೀ ಕೃಷ್ಣನಂದ ಗುರೂಜಿ, ದತ್ತ ಸೇವಾಶ್ರಮ, ದಾವಣಗೆರೆ, ಕರ್ನಾಟಕ

ಶ್ರೀಕೃಷ್ಣಾನಂದ ಗುರೂಜಿಯವರು ಶ್ರೀ. ರಮೇಶ್ ಅವರನ್ನು ಸತ್ಕಾರ ಮಾಡುವಾಗ

ದಾವಣಗೆರೆ – ನಾನು ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರನಾಗಿದ್ದೇನೆ. ಪತ್ರಿಕೆಯಲ್ಲಿ ಕೂಡ ತುಂಬಾ ಒಳ್ಳೆಯ ವಿಷಯಗಳು ಇರುತ್ತದೆ. ಈ ಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು. ನೀವು ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ. ನೀವು ಇದನ್ನು ಮುಂದುವರಿಸಿ, ಎಂದು ದಾವಣಗೆರೆಯ ದತ್ತ ಸೇವಾಶ್ರಮದ ಶ್ರೀಕೃಷ್ಣನಂದ ಗುರೂಜಿ ಇವರು ಸನಾತನದ ಸಾಧಕರಿಗೆ ಆಶೀರ್ವಾದವನ್ನು ನೀಡಿದರು. ಸನಾತನ ಸಂಸ್ಥೆಯ ವತಿಯಿಂದ ಗ್ರಂಥ ಪ್ರಸಾರದ ದೃಷ್ಟಿಯಿಂದ ನಡೆಯುತ್ತಿರುವ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ ಸಾಧಕರು ಅವರನ್ನು ಭೇಟಿಯಾಗಿದ್ದರು. ಶ್ರೀಕೃಷ್ಣನಂದ ಗುರುಜಿ ಇವರನ್ನು ಸನಾತನದ ಗ್ರಂಥಗಳ ಮಾಹಿತಿ ನೀಡಿದ ನಂತರ ಅವರಿಗೆ ಗ್ರಂಥಗಳು ತುಂಬಾ ಇಷ್ಟವಾದವು. ಸನಾತನದ ಚೈತನ್ಯಮಯ ಗ್ರಂಥಗಳ ಲಾಭವು ಸಮಾಜದಲ್ಲಿನ ಹೆಚ್ಚೆಚ್ಚು ಜನರಿಗೆ ಸಿಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಭಾರತಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ.

ಕ್ಷಣಚಿತ್ರಗಳು

1. ಗುರೂಜಿಯವರು ಸಾಧಕರಿಂದ ಶ್ರೀ ದತ್ತಗುರು, ಶ್ರೀ ಕಾಳಿ ದೇವಿ ಮತ್ತು ಆಂಜನೇಯ ಸ್ವಾಮಿ ಈ ದೇವತೆಗಳ ಮೂರ್ತಿಗಳಿಗೆ ಆರತಿ ಮಾಡಿಸಿಕೊಂಡರು. ತೀರ್ಥ ಪ್ರಸಾದ ಕೊಟ್ಟ ನಂತರ ‘ಸಾಧಕರ ಸಾಧನೆ ಮತ್ತು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ ಸೇವೆಯು ಉತ್ತಮ ರೀತಿಯಲ್ಲಿ ನಡೆಯಲಿ’, ಎಂದು ಪ್ರಾರ್ಥನೆ ಮಾಡಿಸಿಕೊಂಡರು.

2. ಗುರುಗಳು ಅವರನ್ನು ಭೇಟಿಯಾಗಲು ಹೋಗಿದ್ದ ಸಾಧಕರನ್ನು ದತ್ತಗುರುಗಳ ಎದುರು ಸತ್ಕಾರ ಮಾಡಿದರು.