
ದಾವಣಗೆರೆ – ನಾನು ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರನಾಗಿದ್ದೇನೆ. ಪತ್ರಿಕೆಯಲ್ಲಿ ಕೂಡ ತುಂಬಾ ಒಳ್ಳೆಯ ವಿಷಯಗಳು ಇರುತ್ತದೆ. ಈ ಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು. ನೀವು ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ. ನೀವು ಇದನ್ನು ಮುಂದುವರಿಸಿ, ಎಂದು ದಾವಣಗೆರೆಯ ದತ್ತ ಸೇವಾಶ್ರಮದ ಶ್ರೀಕೃಷ್ಣನಂದ ಗುರೂಜಿ ಇವರು ಸನಾತನದ ಸಾಧಕರಿಗೆ ಆಶೀರ್ವಾದವನ್ನು ನೀಡಿದರು. ಸನಾತನ ಸಂಸ್ಥೆಯ ವತಿಯಿಂದ ಗ್ರಂಥ ಪ್ರಸಾರದ ದೃಷ್ಟಿಯಿಂದ ನಡೆಯುತ್ತಿರುವ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ ಸಾಧಕರು ಅವರನ್ನು ಭೇಟಿಯಾಗಿದ್ದರು. ಶ್ರೀಕೃಷ್ಣನಂದ ಗುರುಜಿ ಇವರನ್ನು ಸನಾತನದ ಗ್ರಂಥಗಳ ಮಾಹಿತಿ ನೀಡಿದ ನಂತರ ಅವರಿಗೆ ಗ್ರಂಥಗಳು ತುಂಬಾ ಇಷ್ಟವಾದವು. ಸನಾತನದ ಚೈತನ್ಯಮಯ ಗ್ರಂಥಗಳ ಲಾಭವು ಸಮಾಜದಲ್ಲಿನ ಹೆಚ್ಚೆಚ್ಚು ಜನರಿಗೆ ಸಿಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಭಾರತಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ.
ಕ್ಷಣಚಿತ್ರಗಳು
1. ಗುರೂಜಿಯವರು ಸಾಧಕರಿಂದ ಶ್ರೀ ದತ್ತಗುರು, ಶ್ರೀ ಕಾಳಿ ದೇವಿ ಮತ್ತು ಆಂಜನೇಯ ಸ್ವಾಮಿ ಈ ದೇವತೆಗಳ ಮೂರ್ತಿಗಳಿಗೆ ಆರತಿ ಮಾಡಿಸಿಕೊಂಡರು. ತೀರ್ಥ ಪ್ರಸಾದ ಕೊಟ್ಟ ನಂತರ ‘ಸಾಧಕರ ಸಾಧನೆ ಮತ್ತು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ ಸೇವೆಯು ಉತ್ತಮ ರೀತಿಯಲ್ಲಿ ನಡೆಯಲಿ’, ಎಂದು ಪ್ರಾರ್ಥನೆ ಮಾಡಿಸಿಕೊಂಡರು.
2. ಗುರುಗಳು ಅವರನ್ನು ಭೇಟಿಯಾಗಲು ಹೋಗಿದ್ದ ಸಾಧಕರನ್ನು ದತ್ತಗುರುಗಳ ಎದುರು ಸತ್ಕಾರ ಮಾಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ