ಸ್ವಾತಂತ್ರ್ಯವೀರ ಸಾವರಕರರ ಕುರಿತಾದ ನಾಟಕವನ್ನು ಪ್ರಸಾರ ಮಾಡಲು ನಿರಾಕರಿಸಿದ ಕೇರಳದ ಕೊಯಿಕೊಡ ಆಕಾಶವಾಣಿ ಕೇಂದ್ರ !

ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೊಂಕು ತಗಲಿದೆ ಎಂಬ ನೆಪ ಒಡ್ಡಿ ಮುಂದೂಡಿಕೆ !

ಕೇರಳದಲ್ಲಿ ಹಿಂದುದ್ವೇಷಿ ಮಾಕಪ ಸರಕಾರವಿರುವುದರಿಂದ ಇಂತಹ ಘಟನೆಯಾಗುವುದರಲ್ಲಿ ಆಶ್ಚರ್ಯವೇನಿಲ್ಲ ! ಕೊರೊನಾದಿಂದ ಸಿಬ್ಬಂದಿ ವರ್ಗವು ಗುಣ ಹೊಂದಿದ ಬಳಿಕ ನಾಟಕವನ್ನು ಸಾದರ ಪಡಿಸುವ ಆದೇಶವನ್ನು ಮುಖ್ಯ ಆಕಾಶವಾಣಿ ಕೇಂದ್ರವು ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು

ಕೊಯಿಕೋಡ (ಕೇರಳ) – ಇಲ್ಲಿನ ಆಕಾಶವಾಣಿ ಕೇಂದ್ರವು ಸ್ವಾತಂತ್ರ್ಯವೀರ ಸಾವರಕರರವರ ಕುರಿತಾದ ನಾಟಕ ಪ್ರಸಾರ ಮಾಡಲು ನಿರಾಕರಿಸಿದೆ. ಅದು ಸೆಪ್ಟೆಂಬರ 24 ರಂದು ಪ್ರಸಾರವಾಗಬೇಕಿತ್ತು. ಆ ವಿಷಯವನ್ನು ರಾಜಧಾನಿ ತಿರುವನಂತಪುರಮನಲ್ಲಿನ ಮುಖ್ಯ ಕೇಂದ್ರಕ್ಕೆ ತಿಳಿಸಲಾಗಿದೆ. ಅದಕ್ಕೆ ‘ಸಿಬ್ಬಂದಿವರ್ಗಕ್ಕೆ ಕೊರೊನಾ ಸೋಂಕು ತಗಲಿದೆ’ ಎಂಬ ಕಾರಣ ನೀಡಲಾಗಿದೆ. ‘ಅಖಿಲ ಭಾರತೀಯ ರೆಡಿಯೋ’ ವತಿಯಿಂದ ಎಲ್ಲಾ ರಾಜ್ಯಗಳ ಆಕಾಶವಾಣಿ ಕೇಂದ್ರಗಳಿಗೆ ‘ರಾಷ್ಟ್ರೀಯ ನಾಟ್ಯ ಉತ್ಸವ’ದಲ್ಲಿ ಸ್ವಾತಂತ್ರ್ಯವೀರ ಸಾವರಕರರವರ ಬಗ್ಗೆ ನಾಟಕವನ್ನು ಸಾದರ ಪಡಿಸುವಂತೆ ಆದೇಶ ನೀಡಲಾಗಿತ್ತು. ಆಕಾಶವಾಣಿಯು ನಾಟಕದ ಮುಖ್ಯ ಸಾಹಿತ್ಯವನ್ನು ಎಲ್ಲಾ ರಾಜ್ಯಗಳಿಗೂ ನೀಡಿದೆ. ರಾಜ್ಯಗಳು ಆ ಸಾಹಿತ್ಯವನ್ನು ಸ್ಥಳೀಯ ಭಾಷೆಯಲ್ಲಿ ಭಾಷಾಂತರ ಮಾಡಿ ಆ ನಾಟಕವನ್ನು ಪ್ರಸಾರ ಮಾಡಬೇಕಾಗಿದೆ.