ಲೂಧಿಯಾನಾ (ಪಂಜಾಬ) ಇಲ್ಲಿಯ ಬೇಕರಿ ವ್ಯಾಪಾರಿಯೊಬ್ಬರಿಂದ ‘ಇಕೋ ಫ್ರೆಂಡ್ಲಿ’ ಎಂದು ಚಾಕಲೇಟಿನ ಶ್ರೀ ಗಣಪತಿ ಮೂರ್ತಿ ತಯಾರಿಕೆ !
ಕಳೆದ ಕೆಲವು ವರ್ಷಗಳಿಂದ ‘ಇಕೋ ಫ್ರೆಂಡ್ಲಿ’ ಹಬ್ಬವನ್ನು ಆಚರಿಸುವ ರೂಢಿಗಳನ್ನು ಉದ್ದೇಶಪೂರ್ವಕವಾಗಿ ಕೇವಲ ಹಿಂದೂ ಧರ್ಮದವರ ಹಣೆಗೆ ಮೆತ್ತುತ್ತಿದ್ದಾರೆ. ಮತ್ತೊಂದೆಡೆ ಮಾತ್ರ ಮೊಹರಂ, ಬಕರಿ ಈದ್ ಮುಂತಾದ ಹಬ್ಬಗಳು ಅವರ ಧರ್ಮಕ್ಕನುಸಾರ ಪರಿಸರವನ್ನು ಧಿಕ್ಕರಿಸಿ ಆಚರಿಸಲಾಗುತ್ತದೆ. ಈ ಬಗ್ಗೆ ಮಾತ್ರ ಯಾರು ಏನು ಮಾತನಾಡುವುದಿಲ್ಲ. ಯಾರಾದರೂ ಮಾತನಾಡಲು ಪ್ರಯತ್ನಿಸಿದರೆ ಅವರನ್ನು ‘ಮತಾಂಧ’ ಎಂದು ಟೀಕಿಸಿ ನಿರ್ಲಕ್ಷಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
ಲುಧಿಯಾನಾ (ಪಂಜಾಬ) – ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ. ‘ಇಕೋ ಫ್ರಂಡ್ಲಿ’ ಎಂದು ಇವರು ಈ ಮೂರ್ತಿಯನ್ನು ತಯಾರಿಸಿರುವುದಾಗಿ ಹೇಳಿದ್ದಾರೆ. ಅವರು ಕಳೆದ ಆರು ವರ್ಷಗಳಿಂದ ಚಾಕೆಲೇಟಿನ ಮೂರ್ತಿ ಮಾಡುತ್ತಿದ್ದಾರೆ. ಕುಕರೆಜಾ ಅವರು ಈ ಬಗ್ಗೆ ಹೇಳುತ್ತಾ, “ಇಕೋ ಫ್ರೆಂಡ್ಲಿ’ ಪದ್ಧತಿಯಿಂದ ಗಣೇಶೋತ್ಸವವನ್ನು ಆಚರಿಸಬಹುದು’, ಹೀಗೊಂದು ಸಂದೇಶವನ್ನು ನಾವು ಈ ಮೂಲಕ ಕೊಡಬಯಸುತ್ತೇವೆ”, ಎಂದಿದ್ದಾರೆ. ‘ಪರಿಸರ ಮಾಲಿನ್ಯವಾಗುವ ಗಣೇಶಮೂರ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕೆಂದು ಕರೆ ನೀಡಿದರು. (‘ಪರಿಸರಕ್ಕೆ ಹಾನಿಯಾಗುವ ಬಕರಿ ಈದ್ ಆಚರಿಸಬೇಡಿ’, ಎಂದು ಹೇಳುವ ಧೈರ್ಯ ಕುಕಾರೇಜಾ ನೀಡಬಹುದೇ ? – ಸಂಪಾದಕರು)

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ