ಬಂಧನವನ್ನು ಪ್ರಶ್ನಿಸಿದ ರಾಜ ಕುಂದ್ರಾ ಇವರ ಅರ್ಜಿವನ್ನು ತಿರಸ್ಕರಿಸಿದ ನ್ಯಾಯಾಲಯ

ಮುಂಬಯಿ – ಅಶ್ಲೀಲ ಚಿತ್ರ ನಿರ್ಮಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ ಕುಂದ್ರಾ ಇವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮುಂಬಯಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಕುಂದ್ರಾ ಇವರ ಜೊತೆ ಅವರ ಸಂಸ್ಥೆಯ ‘ಐಟಿ’ಯ ಪ್ರಮುಖ ರಾಯನ ಥಾರ್ಪೇ ಇವರ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ಮೂರು ವಾರಗಳಿಂದ ಇವರಿಬ್ಬರು ಸೆರೆಮನೆಯಲ್ಲಿದ್ದಾರೆ. ವಿಚಾರಣೆಯಲ್ಲಿ ಸಹಕರಿಸಿದ ಕಾರಣ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.