ಬಾಂಗ್ಲಾದೇಶದ ಖುಲನಾ ಜಿಲ್ಲೆಯಲ್ಲಿ ನೂರಾರು ಮತಾಂಧರಿಂದ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ, ದೇವತೆಗಳ ವಿಗ್ರಹಗಳು ಧ್ವಂಸ !

  • ೪ ದೊಡ್ಡ ಮತ್ತು ೬ ಸಣ್ಣ ದೇವಸ್ಥಾನಗಳ ಮೇಲೆ ದಾಳಿ !

  • ಹಿಂದೂಗಳ ೫೬ ಮನೆಗಳು ಮತ್ತು ಅನೇಕ ಅಂಗಡಿಗಳಲ್ಲಿ ಲೂಟಿ !

  • ಇಸ್ಲಾಮಿ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಅವರ ಶ್ರದ್ಧಾಸ್ಥಾನಗಳ ಮೇಲಾಗುವ ನಿರಂತರ ದಾಳಿಗಳು ಭಾರತದ ಹಿಂದೂಗಳಿಗೆ ಮತ್ತು ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಯ ಸಂಗತಿ ! ಇಂತಹ ದಾಳಿಗಳನ್ನು ತಡೆಗಟ್ಟಲು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಅನಿವಾರ್ಯವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

  • ಜಿಹಾದಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಪಲಾಯನಗೈದಿರುವ ಹಿಂದೂಗಳಿಗೆ ಭಾರತದ ಪೌರತ್ವ ನೀಡುವುದರ ವಿರುದ್ಧ ಕೂಗಾಡುವ ಜಾತ್ಯತೀತವಾದಿಗಳು ಈಗ ಮಾತ್ರ ಮೌನವಾಗಿದ್ದಾರೆ. ಭಾರತೀಯ ಮುಸ್ಲಿಮರ ವಿರುದ್ಧ ಸಣ್ಣ ಘಟನೆಯಾದರೂ ಅದನ್ನು ಎತ್ತಿ ಹಿಡಿಯುವ ಜಾತ್ಯತೀತ ರಾಜಕಾರಣಿಗಳು ಮತ್ತು ಪ್ರಗತಿಪರರಿಗೆ ಭಾರತೀಯ ಹಿಂದೂಗಳು ಈಗ ಉತ್ತರವನ್ನು ಕೇಳಬೇಕು !

  • ಭಾರತೀಯ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲಾಗಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಅದರಲ್ಲಿ ರಾಜಕೀಯ ಮಾಡುವ ರಾಜಕೀಯ ಪಕ್ಷಗಳ ಪಿತೂರಿಗಳಿಗೆ ಕೈ ಜೋಡಿಸಿ ನಿರಂತರವಾಗಿ ಸುದ್ಧಿ ಮಾಡುವ ಭಾರತೀಯ ಸುದ್ದಿ ವಾಹಿನಿಗಳು, ಇಸ್ಲಾಮಿಕ್ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯ ಘಟನೆಗಳ ‘ಬ್ರೆಕಿಂಗ್ ನ್ಯೂಸ್’ ದೂರವಿರಲಿ; ಸಣ್ಣ ಟಿಪ್ಪಣಿಯನ್ನೂ ಕೊಡುವುದಿಲ್ಲ ! ಹಿಂದೂಗಳೇ, ಇಂತಹ ಸುದ್ದಿ ವಾಹಿನಿಗಳನ್ನು ಸರಿದಾರಿಗೆ ತರಲು ಅವುಗಳ ಮೇಲೆ ಬಹಿಷ್ಕಾರ ಹಾಕಬೇಕು !

ಈ ಚಿತ್ರವನ್ನು ಪ್ರಕಟಿಸುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳನ್ನು ನೋವುಂಟುಮಾಡುವುದಾಗಿರದೆ ನಿಜವಾದ ಸ್ಥಿತಿ ತಿಳಿಸುವುದಾಗಿದೆ

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಖುಲನಾ ಜಿಲ್ಲೆಯಲ್ಲಿರುವ ಶಿಯಾಲಿ ಗ್ರಾಮದಲ್ಲಿ ಆಗಸ್ಟ್ ೭ ರ ಮಧ್ಯಾಹ್ನ ನೂರಾರು ಮತಾಂಧರು ಜಮಾಯಿಸಿದರು. ಅವರು ಹಳ್ಳಿಯ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶಪಡಿಸಿದರು. ಅದರಲ್ಲಿ ೪ ದೊಡ್ಡ ಮತ್ತು ೬ ಸಣ್ಣ ದೇವಸ್ಥಾನಗಳು ಒಳಗೊಂಡಿವೆ. ಸ್ಥಳೀಯ ಹಿಂದೂಗಳು ನೀಡಿದ ಮಾಹಿತಿಯ ಪ್ರಕಾರ, ಮತಾಂಧರು ಗೋವಿಂದ ದೇವಸ್ಥಾನ, ಶಿಯಾಲಿ ಪೂರ್ವಪಾರಾ ಹರಿ ಮಂದಿರ, ಶಿಯಾಲಿ ಪೂರ್ವಪಾರಾ ದುರ್ಗಾ ದೇವಸ್ಥಾನ, ಶಿಯಾಲಿ ಮಹಾಸ್ಮಶಾನ ದೇವಸ್ಥಾನಗಳಲ್ಲಿ ದೇವತೆಗಳ ವಿಗ್ರಹಗಳ ವಿಡಂಬನೆ ಮಾಡಿದರು. ಅದರ ನಂತರ, ಮತಾಂಧರು ಹಿಂದೂಗಳ ೫೬ ಮನೆಗಳು ಮತ್ತು ಅನೇಕ ಅಂಗಡಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಲೂಟಿ ಮಾಡಿದರು. ಮತಾಂಧರು ಹಿಂದೂಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಅನೇಕರನ್ನು ಗಾಯಗೊಳಿಸಿದರು. ಹಸುಗಳು ಮತ್ತು ಇತರ ಸಾಕು ಪ್ರಾಣಿಗಳನ್ನು ಸಹ ತೆಗೆದುಕೊಂಡು ಹೋದರು. ಘಟನೆಯ ನಂತರ, ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪ್ರಸ್ತುತ, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

೧. ಸ್ಥಳೀಯ ಗ್ರಾಮಸ್ಥರು ಮತ್ತು ಪೂಜಾ ಪರಿಷತ್ತಿನ ನಾಯಕರು ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ ೬ ರ ರಾತ್ರಿ ೯ ಗಂಟೆಗೆ, ಸ್ಥಳೀಯ ಹಿಂದೂ ಮಹಿಳೆಯರು ಕೀರ್ತನೆ ಮಾಡಲು ‘ಹರೇ ಕೃಷ್ಣ’ ಎಂದು ಹೇಳುತ್ತಾ ಹೊರಟಿದ್ದರು. ಅವರು ಒಂದು ಮಸೀದಿಯ ಹತ್ತಿರ ಬಂದಾಗ, ಇಮಾಮನು ಅವರನ್ನು ಖಂಡಿಸಿ ಮತ್ತು ನಾಮಜಪವನ್ನು ಮಾಡದಂತೆ ಬಲವಂತ ಮಾಡಿದ. ನಂತರ ಅವರ ನಡುವೆ ವಾಗ್ವಾದವಾಯಿತು. ಮರುದಿನ, ಎರಡೂ ಗುಂಪುಗಳು ರಾಜಿಮಾಡಿಕೊಳ್ಳಲು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಲು ನಿರ್ಧರಿಸಿದವು.

೨. ಮರುದಿನ ಮಾತ್ರ ಸಮೀಪದ ಚಾಂದಪುರ ಹಳ್ಳಿಯ ನೂರಾರು ಮತಾಂಧರು, ಕೊಡಲಿ, ಕತ್ತಿ, ಚಾಕು ಮುಂತಾದ ಹರಿತ ಆಯುಧಗಳನ್ನು ತೆಗೆದುಕೊಂಡು ಶಿಯಾಲಿ ಗ್ರಾಮವನ್ನು ಪ್ರವೇಶಿಸಿದರು ಮತ್ತು ದೇವಾಲಯಗಳ ಮೇಲೆ ದಾಳಿ ಮಾಡಿದರು, ಹಾಗೆಯೇ ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಲೂಟಿ ಮಾಡಿದರು.

ಮತಾಂಧರನ್ನು ಬೆನ್ನಟ್ಟಿದ ಹಿಂದೂಗಳನ್ನು ತಡೆದ ಪೋಲಿಸರು !

ಇಸ್ಲಾಮಿಕ್ ರಾಷ್ಟ್ರವಾಗಿರುವ ಬಾಂಗ್ಲಾದೇಶದ ಪೊಲೀಸರಿಂದ ಇನ್ನೇನು ನಿರೀಕ್ಷಿಸಬಹುದು ?

ರೂಪಶಾ ಠಾಣೆ ಪೂಜೋತ್ಸವ ಪರಿಷತ್ತಿನ ಅಧ್ಯಕ್ಷ ಶಕ್ತಿಪಾದ್ ಬಸು ನೀಡಿದ ಮಾಹಿತಿಯ ಪ್ರಕಾರ, ಹಿಂದೂಗಳು ದಾಳಿ ಮಾಡುವ ಮತಾಂಧರನ್ನು ಹಿಡಿಯುವಂತೆ ಪೊಲೀಸರನ್ನು ಒತ್ತಾಯಿಸಿದರು; ಆದರೆ ಪೊಲೀಸರು ಅದಕ್ಕೆ ನಿರಾಕರಿಸಿದರು. ಆದ್ದರಿಂದ, ಹಿಂದೂಗಳು ಮತಾಂಧರನ್ನು ಬೆನ್ನಟ್ಟಿ ಹಿಡಿಯಲು ಆರಂಭಿಸಿದರು, ಆಗ ಪೊಲೀಸರು ಅವರನ್ನು ತಡೆದು ಪ್ರತಿಕಾರವನ್ನು ತೆಗೆದುಕೊಳ್ಳಲು ಬಿಡಲಿಲ್ಲ.