ಅಪಘಾನಿಸ್ತಾನದಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲಿನ ಗೋಲಿಬಾರಿನಲ್ಲಿ ಸುರಕ್ಷಾ ಕರ್ಮಚಾರಿಯ ಮೃತ್ಯು

ಕಾಬುಲ(ಅಫಘಾನಿಸ್ತಾನ) – ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್‌ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ. ಈ ವಿಷಯದ ಬಗ್ಗೆ ತಾಲಿಬಾನ್‌ನ ವಕ್ತಾರರಾದ ಜಬಿವುಲ್ಲಾ ಮುಜಾಹಿದ್ ಇವರು ಟ್ವೀಟ್ ಮಾಡಿ, ಅಫಘಾನ ಸೈನ್ಯದ ಜೊತೆ ನಡೆಯುತ್ತಿರುವ ಚಕಮಕಿಯಲ್ಲಿ ಸುರಕ್ಷಾ ಕರ್ಮಚಾರಿಗೆ ಗುಂಡು ತಾಗಿರಬಹುದು ಎಂದು ಹೇಳಿದ್ದಾನೆ.