ದೇಶದಲ್ಲಿ ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ಒಟ್ಟು ೩೨೬ ದೇಶದ್ರೋಹದ ಅಪರಾಧದ ಪ್ರಕರಣದಲ್ಲಿ ಕೇವಲ ೬ ಜನರಿಗೆ ಮಾತ್ರ ಶಿಕ್ಷೆ ! – ಕೇಂದ್ರ ಗೃಹ ಮಂತ್ರಾಲಯದ ಮಾಹಿತಿ

ದೇಶದಲ್ಲಿ ಅಪರಾಧಿಗಳಿಗೆ ಅನೇಕ ವರ್ಷಗಳ ನಂತರವೂ ಶಿಕ್ಷೆಯಾಗದೇ ಇದ್ದಲ್ಲಿ, ಅಪರಾಧಗಳು ಎಂದಾದರೂ ಕಡಿಮೆಯಾಗಬಹುದೇನು ? ಈ ಸ್ಥಿತಿಯು ಇಂದಿನವರೆಗಿನ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ನಾಚಿಕೆಯ ವಿಷಯವಾಗಿದೆ !

ನವ ದೆಹಲಿ – ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ ಒಟ್ಟು ೩೨೬ ಅಪರಾಧಗಳನ್ನು ನೊಂದಾಯಿಸಲಾಗಿದೆ ಹಾಗೂ ಈ ಪೈಕಿ ಕೇವಲ ೬ ಜನರಿಗೆ ಶಿಕ್ಷೆ ನೀಡಲಾಗಿದೆ, ಎಂದು ಕೇಂದ್ರದ ಗೃಹ ಮಂತ್ರಾಲಯವು ಮಾಹಿತಿ ನೀಡಿದೆ. ೨೦೨೦ರ ಅಂಕಿಅಂಶಗಳನ್ನು ತಯಾರಿಸಿಲ್ಲ ಎಂದು ಮಂತ್ರಾಲಯದಿಂದ ಹೇಳಲಾಗಿದೆ.

೧. ಝಾರಖಂಡದಲ್ಲಿ ೪೦, ಹರಿಯಾಣಾ ೩೧, ಬಿಹಾರ, ಜಮ್ಮು-ಕಾಶ್ಮೀರ ಹಾಗೂ ಕೇರಳದಲ್ಲಿ ೨೫, ಕರ್ನಾಟಕದಲ್ಲಿ ೨೨, ಉತ್ತರಪ್ರದೇಶದಲ್ಲಿ ೧೭, ಬಂಗಾಲದಲ್ಲಿ ೮, ದೆಹಲಿಯಲ್ಲಿ ೪ ಹಾಗೂ ಮಹಾರಾಷ್ಟ್ರ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ೧ ರಂತೆ ಅಪರಾಧಗಳು ದಾಖಲಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿಯೂ ಅಪರಾಧಗಳನ್ನು ದಾಖಲಿಸಲಾಗಿದೆ

೨. ೩೨೬ ಅಪರಾಧಗಳ ಪೈಕಿ ಅಸ್ಸಾಂನಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ ೫೪ ಅಪರಾಧಗಳು ದಾಖಲಾಗಿವೆ. ವಿಶೇಷವೆಂದರೆ ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ರಾಜ್ಯದ ಯಾವುದೇ ವ್ಯಕ್ತಿಗೆ ಶಿಕ್ಷೆಯಾಗಿಲ್ಲ.

. ೧೪೧ ಅಪರಾಧಗಳಲ್ಲಿ ಆರೋಪಪತ್ರ ಸಲ್ಲಿಸಲಾಗಿದೆ ಹಾಗೂ ೬ ವರ್ಷದ ಕಾಲಾವಧಿಯಲ್ಲಿ ಇವುಗಳ ಪೈಕಿ ೬ ಜನರಿಗೆ ಶಿಕ್ಷೆಯಾಗಿದೆ.

೪. ‘ಲೋಕಮಾನ್ಯ ತಿಲಕಯವರಂತಹ ಜನರಿಗೆ ಬ್ರಿಟಿಷರು ಉಪಯೋಗಿಸಿದ ಕಾನೂನಿನ ದೇಶದ್ರೋಹದ ಭಾ.ದಂ.ಸಂ. ಕಲಂ ೧೨೪ (ಅ)ನ ಏರ್ಪಾಡನ್ನು ಏಕೆ ರದ್ದು ಪಡಿಸುತ್ತಿಲ್ಲ ?’ ಎಂದು ಸರ್ವೋಚ್ಚ ನ್ಯಾಯಾಲಯವು ಕೆಲವು ದಿನಗಳ ಹಿಂದೆಯೇ ಕೇಂದ್ರಕ್ಕೆ ಕೇಳಿತ್ತು.