ದೇಶದಲ್ಲಿ ಅಪರಾಧಿಗಳಿಗೆ ಅನೇಕ ವರ್ಷಗಳ ನಂತರವೂ ಶಿಕ್ಷೆಯಾಗದೇ ಇದ್ದಲ್ಲಿ, ಅಪರಾಧಗಳು ಎಂದಾದರೂ ಕಡಿಮೆಯಾಗಬಹುದೇನು ? ಈ ಸ್ಥಿತಿಯು ಇಂದಿನವರೆಗಿನ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ನಾಚಿಕೆಯ ವಿಷಯವಾಗಿದೆ !

ನವ ದೆಹಲಿ – ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ ಒಟ್ಟು ೩೨೬ ಅಪರಾಧಗಳನ್ನು ನೊಂದಾಯಿಸಲಾಗಿದೆ ಹಾಗೂ ಈ ಪೈಕಿ ಕೇವಲ ೬ ಜನರಿಗೆ ಶಿಕ್ಷೆ ನೀಡಲಾಗಿದೆ, ಎಂದು ಕೇಂದ್ರದ ಗೃಹ ಮಂತ್ರಾಲಯವು ಮಾಹಿತಿ ನೀಡಿದೆ. ೨೦೨೦ರ ಅಂಕಿಅಂಶಗಳನ್ನು ತಯಾರಿಸಿಲ್ಲ ಎಂದು ಮಂತ್ರಾಲಯದಿಂದ ಹೇಳಲಾಗಿದೆ.
ಐದು ವರ್ಷದಲ್ಲಿ ಒಟ್ಟು 326 ದೇಶದ್ರೋಹ ಕೇಸ್ ದಾಖಲು; ಆದರೆ 6ರಲ್ಲಿ ಮಾತ್ರ ಆರೋಪ ಸಾಬೀತು!
#Unionhomeministry https://t.co/pPYd8VH16W— vijaykarnataka (@Vijaykarnataka) July 19, 2021
೧. ಝಾರಖಂಡದಲ್ಲಿ ೪೦, ಹರಿಯಾಣಾ ೩೧, ಬಿಹಾರ, ಜಮ್ಮು-ಕಾಶ್ಮೀರ ಹಾಗೂ ಕೇರಳದಲ್ಲಿ ೨೫, ಕರ್ನಾಟಕದಲ್ಲಿ ೨೨, ಉತ್ತರಪ್ರದೇಶದಲ್ಲಿ ೧೭, ಬಂಗಾಲದಲ್ಲಿ ೮, ದೆಹಲಿಯಲ್ಲಿ ೪ ಹಾಗೂ ಮಹಾರಾಷ್ಟ್ರ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ೧ ರಂತೆ ಅಪರಾಧಗಳು ದಾಖಲಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿಯೂ ಅಪರಾಧಗಳನ್ನು ದಾಖಲಿಸಲಾಗಿದೆ
೨. ೩೨೬ ಅಪರಾಧಗಳ ಪೈಕಿ ಅಸ್ಸಾಂನಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ ೫೪ ಅಪರಾಧಗಳು ದಾಖಲಾಗಿವೆ. ವಿಶೇಷವೆಂದರೆ ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ರಾಜ್ಯದ ಯಾವುದೇ ವ್ಯಕ್ತಿಗೆ ಶಿಕ್ಷೆಯಾಗಿಲ್ಲ.
೩. ೧೪೧ ಅಪರಾಧಗಳಲ್ಲಿ ಆರೋಪಪತ್ರ ಸಲ್ಲಿಸಲಾಗಿದೆ ಹಾಗೂ ೬ ವರ್ಷದ ಕಾಲಾವಧಿಯಲ್ಲಿ ಇವುಗಳ ಪೈಕಿ ೬ ಜನರಿಗೆ ಶಿಕ್ಷೆಯಾಗಿದೆ.
೪. ‘ಲೋಕಮಾನ್ಯ ತಿಲಕಯವರಂತಹ ಜನರಿಗೆ ಬ್ರಿಟಿಷರು ಉಪಯೋಗಿಸಿದ ಕಾನೂನಿನ ದೇಶದ್ರೋಹದ ಭಾ.ದಂ.ಸಂ. ಕಲಂ ೧೨೪ (ಅ)ನ ಏರ್ಪಾಡನ್ನು ಏಕೆ ರದ್ದು ಪಡಿಸುತ್ತಿಲ್ಲ ?’ ಎಂದು ಸರ್ವೋಚ್ಚ ನ್ಯಾಯಾಲಯವು ಕೆಲವು ದಿನಗಳ ಹಿಂದೆಯೇ ಕೇಂದ್ರಕ್ಕೆ ಕೇಳಿತ್ತು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !