ಕಾಶ್ಮೀರದಲ್ಲಿ ಕಳೆದ ೨೪ ಗಂಟೆಯಲ್ಲಿ ೫ ಭಯೋತ್ಪಾದಕರ ಸಾವು

ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರ ಸಂಹಾರ ಮಾಡಲಾಗುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ನಾಶವಾಗುತ್ತಿಲ್ಲ; ಇದಕ್ಕೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಯವು ಪಾಕ್‍ನಿಂದ ನಿರಂತರವಾಗಿ ನಡೆಯುತ್ತದೆ. ಅದನ್ನು ನಿಲ್ಲಿಸಲು ಪಾಕ್‍ಅನ್ನು ನಾಶ ಮಾಡುವುದು ಅಗತ್ಯವಿದೆ !

ಶ್ರೀನಗರ (ಜಮ್ಮು-ಕಾಶ್ಮೀರ) – ಕುಲಗಾಮ ಮತ್ತು ಪುಲವಾಮಾದಲ್ಲಿ ಜುಲೈ ೮ ರಂದು ನಡೆದ ಚಕಮಕಿಯಲ್ಲಿ ಭದ್ರತಾಪಡೆಯು ೪ ಭಯೋತ್ಪಾದಕರನ್ನು ಸಂಹರಿಸಿತ್ತು. ಅದಕ್ಕೂ ಮೊದಲು ಜುಲೈ ೭ ರಂದು ಕುಪವಾಡಾದಲ್ಲಿ ಗ್ಯಾಂದರ್ಸ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಕಮಾಂಡರ ಮೆಹರಾಜುದ್ದೀನ್ ಹಲವಾಯಿ ಅಲಿಯಾಸ್ ಉಬೈದ್‍ನನ್ನು ಕೊಲ್ಲಲಾಗಿತ್ತು. ಕಳೆದ ೨೪ ಗಂಟೆಗಳಲ್ಲಿ ಒಟ್ಟು ೫ ಭಯೋತ್ಪಾದಕರನ್ನು ಕೊಲ್ಲಲಾಯಿತು. ಕುಲಗಾಮದಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಯಿತು. ಆತ ಲಷ್ಕರ್-ಎ-ತೋಯಿಬಾದ ಭಯೋತ್ಪಾದಕನಾಗಿದ್ದ. ಪುಲವಾಮಾದ ಪುಚಲ ಪ್ರದೇಶದ ಚಕಮಕಿಯಲ್ಲಿ ೨ ಭಯೋತ್ಪಾದಕರನ್ನು ಕೊಲ್ಲಲಾಯಿತು.