ಮುಸಲ್ಮಾನ ನಾಯಕರ ೮ ಗುಂಪುಗಳನ್ನು ಸ್ಥಾಪಿಸಿ ಪರಿಹಾರ ಕೇಳುವೆವು !
|
* ಸಮಾನ ನಾಗರಿಕ ಕಾಯ್ದೆ ಮತ್ತು ಜನಸಂಖ್ಯೆ ನಿಯಂತ್ರಣ ಕಾಯ್ದೆ ಇವೇ ಮುಖ್ಯವಾದ ಪರಿಹಾರವಾಗಿದೆ. ಅದನ್ನು ಮಾಡಲು ಅಸ್ಸಾಂ ಸರಕಾರವು ಕೇಂದ್ರ ಸರಕಾರಕ್ಕೆ ಹೇಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! * ಇಂತಹ ಗಾಂಧಿಗಿರಿಯ ಪ್ರಯತ್ನಕ್ಕೆ ಯಶಸ್ಸು ಲಭಿಸಿದರೆ, ಒಳ್ಳೆಯದೇ; ಆದರೆ ಕಳೆದ ನೂರಾರು ವರ್ಷದ ಮತಾಂಧರ ಇತಿಹಾಸವನ್ನು ನೋಡಿದರೆ, ಈ ಪ್ರಯತ್ನ ಪ್ರಾಯೋಗಿಕ ಮಟ್ಟದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ, ಈ ಬಗ್ಗೆ ಹಿಂದೂಗಳಲ್ಲಿ ಸಂದೇಹವಿದೆ ! |

ಗೌಹಾಟಿ (ಅಸ್ಸಾಂ) – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಜುಲೈ ೪ ರಂದು ರಾಜ್ಯದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ರಾಜ್ಯದ ೧೫೦ ಮುಸಲ್ಮಾನ ನಾಯಕರ ಸಭೆಯನ್ನು ಆಯೋಜಿಸಿ ಚರ್ಚಿಸಿದರು. ಮುಸಲ್ಮಾನರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವು ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಅಡಚಣೆಯಾಗಿದೆ ಎಂದು ಮುಸಲ್ಮಾನ ನೇತಾರರು ಈ ಸಭೆಯಲ್ಲಿ ಒಪ್ಪಿಕೊಂಡರು. ಮತ್ತು ಅದನ್ನು ದೂರಗೊಳಿಸಲು ಪರಿಹಾರವನ್ನು ಸೂಚಿಸಲು ೮ ಗುಂಪುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜ್ಯದ ಮುಸಲ್ಮಾನ ನಾಯಕರು ಸಹಭಾಗಿಯಾಗಲಿದ್ದಾರೆ. ಈ ಗುಂಪು ಮುಂದಿನ ೩ ತಿಂಗಳಲ್ಲಿ ತಮ್ಮ ವರದಿಯನ್ನು ಸಲ್ಲಿಸಲಿದೆ.
Assam CM Himanta Biswa Sarma urges Muslims to find ways to control population https://t.co/SXviMm7OUm pic.twitter.com/t8kwEn8PVz
— The Times Of India (@timesofindia) July 5, 2021
೧. ಮುಖ್ಯಮಂತ್ರಿ ಸರಮಾ ಇವರು ಈ ಚರ್ಚೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘ಅಸ್ಸಾಂಗೆ ದೇಶದ ಪ್ರಮುಖ ೫ ರಾಜ್ಯದ ಸಾಲಿನಲ್ಲಿ ಬರಬೇಕಾದಲ್ಲಿ, ಜನಸಂಖ್ಯಾಸ್ಪೋಟವನ್ನು ತಡೆಗಟ್ಟಬೇಕು.’ ಎಂದು ಹೇಳಿದರು, ಇದನ್ನು ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರು ಒಪ್ಪಿದರು. ೮ ಗುಂಪುಗಳಿಂದ ವರದಿ ಬಂದನಂತರ ಅಲ್ಪಸಂಖ್ಯಾತರ ವಿಕಾಸಕ್ಕಾಗಿ ಒಂದು ಕರಡನ್ನು ನಿರ್ಮಿಸಲಾಗುವುದು ಮತ್ತು ಮುಂದಿನ ೫ ವರ್ಷ ಅದಕ್ಕನುಸಾರ ಕೆಲಸ ಮಾಡಲಾಗುವುದು.
೨. ಮುಖ್ಯಮಂತ್ರಿ ಸರಮಾ ಅವರು, ಮುಂದಿನ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರೊಂದಿಗೆ ವಿದ್ಯಾರ್ಥಿ ಸಂಘಟನೆಯೂ ಭಾಗವಹಿಸಲಿದೆ. ಅದೇ ರೀತಿ ಇತರ ಪ್ರಾಂತ್ಯಗಳಿಂದ (ಉದಾ ಬಾಂಗ್ಲಾದೇಶಿ ಮುಸಲ್ಮಾನ) ಬಂದವರ ಜೊತೆಯಲ್ಲೂ ಚರ್ಚಿಸಲಾಗುವುದು. (ಇಂತಹವರನ್ನು ಭಾರತದಿಂದ ಏಕೆ ಗಡಿಪಾರು ಮಾಡುವುದಿಲ್ಲ ? -ಸಂಪಾದಕ)
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !