೪೮ ದಿನಗಳವರೆಗೆ ನಡೆಯಲಿದೆ ಮಹಾಯಜ್ಞ !
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರಿಂದ ಈ ರೀತಿಯ ಅಧಾರ್ಮಿಕ ಕೃತಿ ಆಗುತ್ತಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಮೂಲಕ ಸಾಧನೆಯನ್ನು ಕಲಿಸಲಾಗುವುದು !

ಕೊಯಮತ್ತೂರು (ತಮಿಳುನಾಡು) – ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ‘ಕೊರೊನಾದಿಂದ ರಕ್ಷಿಸಲು ದೇವರು ಮಾತ್ರ ಸಹಾಯ ಮಾಡಬಹುದು’, ಎಂಬ ಶ್ರದ್ಧೆಯಿಂದ ಸ್ಥಳೀಯರು ನಗರದ ಹೊರಗೆ ಕೊರೊನಾ ದೇವಿಯ ದೇವಾಲಯವನ್ನು ನಿರ್ಮಿಸಿದ್ದಾರೆ.
ತಮಿಳುನಾಡಿನಲ್ಲಿ ಕೊರೋನಾ ದೇವಿ ದೇವಸ್ಥಾನ ನಿರ್ಮಾಣ!#TamilNadu #Covid19 #IndiaFightsCorona #karnatakahttps://t.co/rjfoygigMj
— Asianet Suvarna News (@AsianetNewsSN) May 20, 2021
೧೦೦ ವರ್ಷಗಳ ಹಿಂದೆ ಪ್ಲೇಗ್ ಸಮಯದಲ್ಲಿ ಪ್ಲೇಗ್ ಮರಿಯಮ್ಮನ ದೇವಾಲಯವನ್ನು ಇಲ್ಲಿ ಸ್ಥಾಪಿಸಲಾಗಿತ್ತು. ಜನರು ಈ ದೇವಿಯನ್ನು ಪೂಜಿಸಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದ ನಂತರ, ಪ್ಲೇಗ ಸಾಂಕ್ರಾಮಿಕ ರೋಗವು ಕಡಿಮೆಯಾದ ವಿಷಯವನ್ನು ತಮ್ಮ ಪೂರ್ವಜರು ಹೇಳಿದ್ದನ್ನು ಕೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ದೇವಾಲಯವನ್ನು ಸಹ ಈಗ ಅದೇ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ನಗರದ ಹೊರವಲಯದಲ್ಲಿರುವ ಇರುಗುರನಲ್ಲಿ ಕಾಮತ್ವಿಪುರಿ ಅಧಿನಮ್ ಎಂಬ ಹೆಸರಿನ ಮಠವು ಈ ದೇವಾಲಯವನ್ನು ಸ್ಥಾಪಿಸಿದೆ. ಈ ದೇವಾಲಯದಲ್ಲಿ ಕೊರೊನಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹವು ಎರಡೂವರೆ ಅಡಿ ಎತ್ತರವಿದೆ. ಕೊರೊನಾದಿಂದ ಮುಕ್ತಿ ಸಿಗಲು ಈ ಸ್ಥಳದಲ್ಲಿ ೪೮ ದಿನಗಳ ಮಹಾಯಜ್ಞವನ್ನು ಆಯೋಜಿಸಲಾಗಿದೆ.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ