ಅತ್ಯಾಚಾರಕ್ಕೊಳಗಾದವರು ಕಾನೂನನ್ನು ಕೈಗೆತ್ತಿಕೊಂಡು ಇಂತಹ ಕ್ರಮ ಏಕೆ ತೆಗೆದುಕೊಳ್ಳುತ್ತಾರೆ ಎಂದು ಯೋಚಿಸುವ ಸಮಯ ಇದು!

ಗಿರಿಡಿಹ್ (ಜಾರಖಂಡ್) – ಹಬೀಬುಲ್ಲಾ ಎಂಬ ಯುವಕ ಓರ್ವ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರ ಸೇಡು ತೀರಿಸಿಕೊಳ್ಳಲು ವಿವಾಹಿತ ಮಹಿಳೆಯು ತನ್ನ ಗಂಡನ ಸಹಾಯದಿಂದ ಹಬೀಬುಲ್ಲಾನನ್ನು ಕೊಂದಳು. ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಮಹಿಳೆಯು ತನ್ನ ಗಂಡನನ್ನು ಉಳಿಸಲು ಯುವಕರಿಬ್ಬರ ಹೆಸರನ್ನು ತೆಗೆದುಕೊಂಡಿದ್ದಾಳೆ; ಆದರೆ ಆ ಯುವಕರ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ಮೇ ೧೬ ರ ರಾತ್ರಿ ಹಬೀಬುಲ್ಲಾ ಗ್ರಾಮದಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ಆತ ಮನೆಗೆ ಹಿಂತಿರುಗಲಿಲ್ಲ, ಆದ್ದರಿಂದ ಅವನ ತಂದೆ ಅವನ ಮೊಬೈಲ್ ಫೋನ್ಗೆ ಸಂಪರ್ಕಿಸಿದರು; ಆದರೆ ಅದು ಬಂದಾಗಿತ್ತು. ಮರುದಿನ, ಹಬೀಬುಲ್ಲಾನ ಶವ ಹೊಲವೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು ಅದರ ತನಿಖೆ ನಡೆಸುತ್ತಿರುವಾಗ, ದಂಪತಿಗಳ ಬಗ್ಗೆ ಅನುಮಾನಾಸ್ಪದ ಮಾಹಿತಿ ಸಿಕ್ಕಿತು. ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ನಂತರ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮದುವೆಯ ದಿನ, ಮಹಿಳೆ ಹಬೀಬುಲ್ಲಾನನ್ನು ಭೇಟಿಯಾಗಲು ದೂರವಾಣಿ ಕರೆ ಮಾಡಿದಳು. ನಂತರ ಮಹಿಳೆಯು ತನ್ನ ಗಂಡನೊಂದಿಗೆ ಸೇರಿ ಅವನನ್ನು ಕೊಂದಳು. ಆತನ ಕುತ್ತಿಗೆ ಕತ್ತರಿಸಲಾಯಿತು, ಮತ್ತು ಅವನ ಜನನಾಂಗಗಳ ಮೇಲೆ ಮರ್ಮಾಘಾತ ಮಾಡಲಾಗಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ