ಡ್ರೈ ರನ್ ಪ್ರಕ್ರಿಯೆಯು ವೈಫಲ್ಯವಾಗಿದ್ದರಿಂದ ಬಳಕೆ ಆಗುತ್ತಿಲ್ಲವೆಂದು ಆಸ್ಪತ್ರೆಯ ಹೇಳಿಕೆ !
ಈ ಇಡೀ ಪ್ರಕ್ರಿಯೆಯಲ್ಲಿ ಯಾರ ತಪ್ಪಿದೆ ? ಇದು ಯಾರಿಂದ ಉಳಿದುಕೊಂಡಿದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು !

ದರಭಂಗಾ (ಬಿಹಾರ) – ಕೊರೊನಾದ ಎರಡನೇ ಅಲೆಯಲ್ಲಿ ವೆಂಟಿಲೇಟರ್ ಗಳು, ರೆಮಡೆಸಿವಿರ್ ಚುಚ್ಚುಮದ್ದು, ಆಮ್ಲಜನಕ, ಲಸಿಕೆಗಳು ಇತ್ಯಾದಿಗಳ ಕೊರತೆ ಇದೆ. ಕೇಂದ್ರವು ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದರೆ, ದರಭಂಗಾದಲ್ಲಿ ‘ಪಿಎಮ್ಕೇರ್ಸ್ ಫಂಡ್’ನಿಂದ ಒದಗಿಸಲಾದ ೨೫ ವೆಂಟಿಲೇಟರ್ಗಳು ಉಪಯೋಗವಾಗದೇ ಹಾಗೇ ಬಿದ್ದುಕೊಂಡಿದೆ. ಕಳೆದ ೯ ತಿಂಗಳಲ್ಲಿ ಒಂದು ಬಾರಿ ಸಹ ಅವುಗಳನ್ನು ಉಪಯೋಗಿಸಿಲ್ಲ ಎಂದು ಹೇಳಲಾಗುತ್ತದೆ.
(ಸೌಜನ್ಯ: Aaj Tak)
ದರಭಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ. ಮಣಿ ಭೂಷಣ ಇವರು ಈ ಬಗ್ಗೆ ಮಾತನಾಡುತ್ತಿರುವಾಗ, ಐಸಿಯು ಸೆಟಪ್ನೊಂದಿಗೆ ವೆಂಟಿಲೇಟರ್ ಗಳು ದೊರೆತಿರುವುದು ನಿಜವಾಗಿದೆ, ಈ ವೆಂಟಿಲೇಟರ್ ಗಳನ್ನು ಬಳಸಲು ತಯಾರಿ ನಡೆಸಿದೆವು; ಆದರೆ ಡ್ರೈ ರನ್ ಪ್ರಕ್ರಿಯೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸದ ಕಾರಣ ಈ ವೆಂಟಿಲೇಟರ್ಗಳನ್ನು ಉಪಯೋಗಿಸಲಿಲ್ಲ. ಅದೇರೀತಿ ಈ ಸ್ಥಳದಲ್ಲಿ ಆಮ್ಲಜನಕ ಪ್ಲಾಂಟ್ಗಳನ್ನು ಸಹ ಪ್ರಾರಂಭಿಸಲಾಗಿದೆ. ಡ್ರೈ ರನ್ ಪ್ರಕ್ರಿಯೆಯನ್ನು ಮತ್ತೆ ಪರೀಕ್ಷಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಈ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸಲಿವೆ. ಡ್ರೈ ರನ್ ಪ್ರಕ್ರಿಯೆಯನ್ನು ಸರಿಯಾಗಿ ಪ್ರಾರಂಭಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಪ್ರಕ್ರಿಯೆಯು ಯೋಗ್ಯ ರೀತಿಯಲ್ಲಿ ಪ್ರಾರಂಭವಾಗದಿದ್ದರೆ, ರೋಗಿಯ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು.
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!