ಕೇರಳದ ಜನರನ್ನು ಕುಡುಕರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಜನತಾ ವಿರೋಧಿ ಕಮ್ಯುನಿಸ್ಟ್ ಸರಕಾರ ! ಆದಾಯದ ಸಲುವಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಮ್ಯುನಿಸ್ಟ್ ಸರಕಾರ ಜನರ ಹಿತ ಸಾಧಿಸಬಹುದೇ ?
ಕೊಚ್ಚಿ: ಕಮ್ಯುನಿಸ್ಟರ ಆಡಳಿತದ ಕೇರಳದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾರಾಟವಾದ ಮದ್ಯದ ಮೌಲ್ಯ ಬೆಚ್ಚಿಬೀಳಿಸುವ ೬೫ ಸಾವಿರ ಕೋಟಿ ರೂಪಾಯಿ ಆಗಿರುವುದು ಬೆಳಕಿಗೆ ಬಂದಿದೆ. ಮದ್ಯದ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಅಂಶವು ಬಹಿರಂಗಪಡಿಸಲಾಗಿದೆ. ಅಧಿಕಾರಕ್ಕೆ ಬಂದ ನಂತರ ಕಮ್ಯುನಿಸ್ಟರು ಅಳವಡಿಸಿಕೊಂಡ ಕೆಲವು ನೀತಿಗಳಿಂದಾಗಿ ಮದ್ಯದ ಮಾರಾಟದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್ ಸರಕಾರವು ಬೀಗ ಜಡಿದ ಎಲ್ಲಾ ಮದ್ಯದಂಗಡಿಗಳನ್ನು ಕಮ್ಯುನಿಸ್ಟರು ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ತೆರೆದರು ಮತ್ತು ೨೦೦ ಹೊಸ ಮದ್ಯದಂಗಡಿಗಳನ್ನು ಮತ್ತು ಒಂಬತ್ತು ಕ್ಲಬ್ಗಳಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದರು. ಕೇರಳದಲ್ಲಿ ೨೦೧೮ ರಲ್ಲಿ ಆದ ಪ್ರವಾಹ ಮತ್ತು೨೦೨೦ ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೇರಳದ ಆರ್ಥಿಕತೆಯು ಕುಸಿದಿದ್ದರೂ, ಮದ್ಯ ಮಾರಾಟದ ಈ ಅಂಕಿಅಂಶಗಳು ಬೆರಗುಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!