ಮೊಘಲ್ ಆಕ್ರಮಣಕಾರರು ದೇಶದ ಸಾವಿರಾರು ಹಿಂದೂ ದೇವಾಲಯಗಳನ್ನು ಅತಿಕ್ರಮಣ ಮಾಡಿ ಅವುಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಈ ಕಾನೂನಿಂದಾಗಿ ಅವುಗಳಿಗೆ ರಕ್ಷಣೆ ಸಿಕ್ಕಿದೆ. ಈಗ ಕಾನೂನನ್ನು ರದ್ದುಗೊಳಿಸಿದರೆ, ಮತಾಂಧರು ಅಂತಹ ದೇವಾಲಯಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ಈ ರೀತಿಯ ವಿರೋಧಗಳು ವ್ಯಕ್ತ ಆಗುತ್ತಿದೆ. ಮತಾಂಧರಲ್ಲಿ ಯಾವುದೇ ಸರ್ವಧರ್ಮ ಸಮಭಾವವಿಲ್ಲದ ಕಾರಣ ಅವರು ಈ ರೀತಿ ವಿರೋಧಿಸುತ್ತಿದ್ದಾರೆ !
ನವ ದೆಹಲಿ : ‘ಪ್ಲೆಸಸ್ ಆಫ್ ವರ್ಶಿಪ್ ೧೯೯೧’ ಅನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಲಕ್ಷ್ಮಣಪುರಿಯ ತಿಲೆವಾಲಿ ಮಸೀದಿಯ ಸಂರಕ್ಷಕ ವಾಸಿಫ್ ಹಸನ್ ಈ ಅರ್ಜಿಯನ್ನು ವಿರೋಧಿಸಿ, ಅದನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಸನ ಇವರು ತಮ್ಮ ಅರ್ಜಿಯಲ್ಲಿ, ದೇಶದ ಮುಸಲ್ಮಾನರನ್ನು ಪ್ರತ್ಯೇಕಗೊಳಿಸುವುದೇ ಈ ಅರ್ಜಿಯ ಉದ್ದೇಶವಾಗಿದೆ. ಅದೇರೀತಿ ವಿದೇಶಿ ಆಕ್ರಮಣಕಾರರು ಭಾರತದಲ್ಲಿನ ಧಾರ್ಮಿಕ ಸ್ಥಳಗಳನ್ನು ನೆಲಸಮ ಮಾಡಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದೆ, ಎಂದು ಹೇಳಿದ್ದಾರೆ.. (ಅದರಲ್ಲಿ ತಪ್ಪೇನಿದೆ ? ಇದಂತೂ ಇತಿಹಾಸವೇ ಆಗಿದೆ ! – ಸಂಪಾದಕರು) ಭಾರತೀಯರಿಗೆ ಹರಿದ್ವಾರ, ಬದ್ರಿನಾಥದಲ್ಲಿನ ದೇವಸ್ಥಾನಗಳ ಬಗ್ಗೆ ಎಷ್ಟು ಗೌರವವಿದೆಯೋ ಅಷ್ಟೇ ಲಕ್ಷಣಪುರಿ ಹಾಗೂ ದೆಹಲಿಯ ಮಸಿದಿಯ ಬಗ್ಗೆಯೂ ಗೌರವವಿದೆ. ಗೋವಾದಲ್ಲಿ ಚರ್ಚ್ ಹಾಗೂ ಅಸ್ಸಾಂದಲ್ಲಿನ ಕಾಮಾಖ್ಯಾ ದೇವಸ್ಥಾನವೂ ಸಹ ಭಾರತೀಯರಿಗೆ ಅಷ್ಟೇ ಪ್ರಿಯವಾಗಿದೆ ಎಂದು ಹೇಳಿದ್ದಾರೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!