|
ನವ ದೆಹಲಿ : ಶ್ರೀನಗರದ ಪ್ರಸಿದ್ಧ ಕೃಷ್ಣ ಢಾಬಾ ಅಂಗಡಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರೆ, ಅಂಗಡಿ ಮಾಲೀಕರ ಮಗ ಆಕಾಶ ಮೆಹ್ತಾ ಗಂಭೀರವಾಗಿ ಗಾಯಗೊಂಡಿದ್ದನು. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಸುನೀಗಿದನು. ಅನಂತರ ಹಿಂದೂಪರ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಈ ಕೃತ್ಯವನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ‘ಕೃಷ್ಣ ಢಾಬಾ’ ಎಂಬ ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಆಗಿತ್ತು.
Krishna Dhaba attack: Akash Mehra, who was shot at by terrorists, succumbs to injuries in Srinagarhttps://t.co/4oujT5m40P
— OpIndia.com (@OpIndia_com) February 28, 2021
೧. ಒಬ್ಬರು ಟ್ವಿಟ್ಟರ್ನಲ್ಲಿ ‘ಭಾರತದಲ್ಲಿ ಹಿಂದೂ ಆಗಿರುವುದು ಅಪರಾಧವೇ?’ ‘ಈಗ ತಥಾಕಥಿತ ಜಾತ್ಯತೀತ ನಾಯಕರು ಮತ್ತು ಪ್ರಶಸ್ತಿ ಹಿಂದಿರುಗಿಸುವ ಗುಂಪು ಎಲ್ಲಿ ಹೋಗಿವೆ?’ ‘ಹಿಂದೂಗಳು ಕೊಲ್ಲಲ್ಪಟ್ಟಾಗ ಜಾತ್ಯತೀತತೆಯ ಕೊಲೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಇಸ್ಲಾಮಿಕ್ ಭಯೋತ್ಪಾದನೆಯು ಓರ್ವ ಪ್ರಬಲ ಹಿಂದೂ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಬರೆದಿದ್ದಾರೆ.
J&K Krishna Dhaba attack: Son of dhaba owner succumbs to injuries.
Omar Abdullah & Mehbooba Mufti offer condolences.Take a look at these ground reports by Waji (Srinagar) & Pradeep (Jammu). pic.twitter.com/Ws87Oh915p
— TIMES NOW (@TimesNow) February 28, 2021
೨. ಮುಸ್ಲಿಂ ಜಂಬಾಜ್ ಫೋರ್ಸ್ ಎಂಬ ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಪೊಲೀಸರು ಈ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಲಷ್ಕರ್-ಎ-ತೋಯಿಬಾ ಗುಂಪಿನೊಂದಿಗೆ ನಂಟಿದೆ.