|

ಕರ್ಣಾವತಿ (ಗುಜರಾತ್) – ಮುಂಬೈಯ ದೊಡ್ಡ ಸಂಸ್ಥೆಯಲ್ಲಿ ಚಾರ್ಟಟೆಡ್ ಅಕೌಂಟೆಟ್ ಆಗಿ ವಾರ್ಷಿಕ ೧೫ ಲಕ್ಷ ರೂ. ಸಂಬಳ ಪಡೆಯುವ ೩೧ ವರ್ಷದ ಜೈನ ಯುವತಿ ಪಾಯಲ್ ಷಾ ಇವರು ಸಂನ್ಯಾಸ ದೀಕ್ಷೆ ಪಡೆದು ಸಾಧ್ವಿಯಾಗಲು ನಿರ್ಧರಿಸಿದ್ದಾರೆ. ಫೆಬ್ರವರಿ ೨೪ ರಂದು ಸೂರತ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ದೀಕ್ಷೆಯನ್ನು ಪಡೆಯುವ ಮೂಲಕ ಅವರು ತನ್ನ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ. ಪಾಯಲ್ ಷಾ ಅವರು ಅಖಿಲ ಭಾರತ ಮಟ್ಟದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿ ಉತ್ತೀರ್ಣರಾಗಿದ್ದರು. ಪೂಜ್ಯ ಸಾಧ್ವಿಜೀ ಪ್ರಾಶಮಲೋಚನಾಶ್ರೀಜಿಯಿಂದ ಪ್ರೇರಿತರಾದ ಅವರು ಸಾಧ್ವಿ ಆಗಲು ನಿರ್ಧರಿಸಿದರು.
ಪಾಯಲ್ ಷಾ ಇವರು ಇದರ ಬಗ್ಗೆ ಮಾತನಾಡುತ್ತಾ, ‘ಏಳು ವರ್ಷಗಳ ಹಿಂದೆ, ನನ್ನ ಮನೆಯ ಸಮೀಪ ವಾಸಿಸುವ ಸಾಧ್ವಿಯ ಮನೆಗೆ ಹೋಗಲು ಪ್ರಾರಂಭಿಸಿದಾಗ, ನನ್ನ ಪ್ರಯಾಣವು ನಿಜವಾದ ಅರ್ಥದಲ್ಲಿ ಪ್ರಾರಂಭವಾಯಿತು. ಈ ಸನ್ಯಾಸಿಗಳು ಒಂದು ದಿನ ರಜೆ ತೆಗೆದುಕೊಳ್ಳದೆ ಅಥವಾ ಮೊಬೈಲ್ ಫೋನ್ ಬಳಸದೆ ಎಷ್ಟು ಆನಂದದಿಂದಿದ್ದಾರೆಂದು ನೋಡಿ ನಾನು ಆಶ್ಚರ್ಯಚಕಿತಳಾದೆ. ಅನಂತರ ನಾನು ಆ ಸಾಧ್ವಿಯೊಂದಿಗೆ ವಾಸಿಸಲು ಪ್ರಾರಂಭಿಸಿದೆ. ನಾನು ಕನಿಷ್ಠ ಒಂದು ವರ್ಷ ಅವರೊಂದಿಗೆ ಇರಬೇಕು, ಆಗ ನನ್ನ ಆಂತರಿಕ ಪ್ರಯಾಣ ಪ್ರಾರಂಭವಾಗುತ್ತದೆ’, ಎಂದರು.
‘ಹಿಂದೂಗಳನ್ನು ವಿಭಜಿಸಲು ಬೇರೆ ದಾರಿ ಹುಡುಕಬೇಕಾಗಿದೆಯೆಂತೆ!’ – Maulana Sajjad Nomani
Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft