ಭಾರತದ ತಪ್ಪಾದ ನಕಾಶೆಯನ್ನು ಪುನರ್ ಪ್ರಸಾರ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ತಪ್ಪು ಸುಧಾರಿಸುವಂತೆ ಮೂರನೆಯ ಬಾರಿ ಎಚ್ಚರಿಕೆ ನೀಡಿದ ಭಾರತ

ವಿಶ್ವ ಆರೋಗ್ಯ ಸಂಸ್ಥೆಗೆ ಶಬ್ದಗಳ ಭಾಷೆಯು ಅರ್ಥವಾಗುವುದಿಲ್ಲ. ಹಾಗಾಗಿ ಭಾರತವು ಅದಕ್ಕೆ ವಾರ್ಷಿಕ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು

ನವ ದೆಹಲಿ – ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ಮಾನಚಿಹ್ನೆ (ನಕಾಶೆ)ಯನ್ನು ಮತ್ತೊಮ್ಮೆ ಅಯೋಗ್ಯ ಪದ್ಧತಿಯಲ್ಲಿ ತೋರಿಸಿದೆ. ಭಾರತವು ಮೂರನೆಯ ಸಲ ಈ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. ಭಾರತವು ಸಂಘಟನೆಯ ಅಧ್ಯಕ್ಷ ಡಾ. ಟ್ರೆಡಾಸ್ ಇವರಿಗೆ ಪತ್ರವನ್ನು ಬರೆದು ತಪ್ಪನ್ನು ಸುಧಾರಣೆ ಮಾಡಲು ತಿಳಿಸಿದೆ.

(ಸೌಜನ್ಯ : A.I.O.C)

ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿರುವ ಭಾರತದ ಮಾನಚಿತ್ರದಲ್ಲಿ (ನಕಾಶೆಯಲ್ಲಿ) ಜಮ್ಮು-ಕಾಶ್ಮೀರ ಮತ್ತು ಲಡಾಖ ಇವೆರಡೂ ಭೂಭಾಗಗಳನ್ನು ಭಾರತದಿಂದ ಪ್ರತ್ಯೇಕಿಸಿ ತೋರಿಸಲಾಗಿದೆ.