ಮೊಘಲರು ಹಿಂದೂ ದೇವಾಲಯಗಳನ್ನು ದುರಸ್ತಿ ಮಾಡುತ್ತಿದ್ದರು ಎಂದು ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಉಲ್ಲೇಖ !

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿಯನ್ನು ಕೇಳಿದಾಗ ಯಾವುದೇ ಪುರಾವೆಗಳಿಲ್ಲ ಎಂದು ಎನ್.ಸಿ.ಇ.ಆರ್.ಟಿ. ಯ ಸ್ವೀಕೃತಿ

  • ಬಿಜೆಪಿಯ ರಾಜ್ಯದಲ್ಲೂ ಎನ್.ಸಿ.ಇ.ಆರ್.ಟಿ.ಯ ಹಿಂದೂದ್ವೇಷ ಮುಂದುವರಿಯುತ್ತಿದೆ ಎಂಬುದು ಹಿಂದೂಗಳಿಗೆ ಅಪೇಕ್ಷಿತವಲ್ಲ !
  • ಎನ್.ಸಿ.ಇ.ಆರ್.ಟಿ. ಯಿಂದ ಇಂತಹ ಸುಳ್ಳು ಮತ್ತು ಮೊಘಲ ಓಲೈಕೆಯ ಇತಿಹಾಸವನ್ನು ಕಲಿಸುವುದು ದೇಶದ ಹಿಂದೂಗಳಿಗೆ ದ್ರೋಹವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಬಿಜೆಪಿ ಸರಕಾರ ಕ್ರಮಕೈಗೊಳ್ಳಬೇಕು ಮತ್ತು ಅವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು !
  • ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ ನಂತರ ಈ ಪ್ರಕಾರ ಬೆಳಕಿಗೆ ಬಂತು, ಇಲ್ಲದಿದ್ದರೆ ಈ ಸುಳ್ಳು ಇತಿಹಾಸ ಬಹಿರಂಗವಾಗುತ್ತಿರಲಿಲ್ಲ ! ಅಂತಹ ಸುಳ್ಳು ಪಾಠಗಳನ್ನು ಸೇರಿಸಿದ ನಂತರವೂ, ಯಾರಿಗೂ ಗಮನಕ್ಕೆ ಬರಲಿಲ್ಲ ಅಥವಾ ಗಮನಕ್ಕೆ ಬಂದರೂ ಅದರತ್ತ ನಿರ್ಲಕ್ಷ ಮಾಡಿದರೇ ?, ಎಂಬುದು ಜನರಿಗೆ ತಿಳಿಸಬೇಕು. ಇದರಿಂದ ಎನ್.ಸಿ.ಇ.ಆರ್.ಟಿ.ಯ ವ್ಯವಹಾರ ಹೇಗೆ ನಡೆಸಲಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ ! ಪದೇ ಪದೇ ಇತಿಹಾಸವನ್ನು ತಿರುಚುವ ಇಂತಹ ಸಂಸ್ಥೆ ಏಕೆ ಬೇಕು ?
  • ‘ಇತಿಹಾಸದ ಕೇಸರಿಕರಣ ಮಾಡಲಾಗುತ್ತಿದೆ’ ಎಂಬ ಆರೋಪಗಳಾಗುತ್ತಿರುವಾಗ, ಇದು ‘ಇತಿಹಾಸದ ಇಸ್ಲಾಮೀಕರಣ’ ಆಗುತ್ತಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ನವದೆಹಲಿ – ಕೇಂದ್ರ ಸರಕಾರಕ್ಕೆ ಒಳಪಡುವ ಎನ್.ಸಿ.ಇ.ಆರ್.ಟಿ.ಯ (‘ನ್ಯಾಶನಲ್ ಕೌಂಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್’ನ) ೧೨ ನೇ ತರಗತಿಯ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟ್ರೀ ಪಾರ್ಟ್-ಟು’ ಈ ಇತಿಹಾಸದ ಪುಸ್ತಕದ ಪುಟ ಸಂಖ್ಯ ೨೩೪ರಲ್ಲಿ ಯುದ್ಧದ ಸಮಯದಲ್ಲಿ ಮೊಘಲ್ ಸೈನ್ಯದಿಂದ ನೆಲಸಮಗೊಂಡ ದೇವಾಲಯಗಳ ದುರಸ್ತಿಗೆ ಶಹಜಹಾನ್ ಮತ್ತು ಔರಂಗಜೇಬ್ ಹಣಕಾಸಿನ ನೆರವು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.

ಆದರೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಸಂಬಂಧಪಟ್ಟ ಪುರಾವೆಗಳು ಮತ್ತು ಸಂಬಂಧಪಟ್ಟ ದೇವಾಲಯಗಳ ಮಾಹಿತಿಯ ಬಗ್ಗೆ ಕೇಳಿದಾಗ ಎನ್.ಸಿ.ಇ.ಆರ್.ಟಿ.ಯು ಈ ವಿಷಯಗಳ ಬಗ್ಗೆ ದಾಖಲಾತಿಗಳಿಲ್ಲ ಎಂದು ಉತ್ತರಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಡಾ. ಇಂದೂ ವಿಶ್ವನಾಥನ್ ಈ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

೧೮ ನವೆಂಬರ ೨೦೨೦ ರಂದು ಇಂತಹ ಉತ್ತರವಿರುವ ಎನ್.ಸಿ.ಇ.ಆರ್.ಟಿ.ಯ ಪತ್ರವನ್ನು ಅರ್ಜಿದಾರ ಶಿವಾಂಕ್ ವರ್ಮಾ ಅವರಿಗೆ ಕಳುಹಿಸಲಾಗಿದೆ.

ಪತ್ರದಲ್ಲಿ ‘ಹೆಡ್ ಆಫ್ ಡಿಪಾರ್ಟಮೆಂಟ್ ಆಂಡ್ ಪಬ್ಲಿಕ ಇನ್ಫಾರ್ಮೇಶನ್ ಆಫಿಸರ್’ ಪ್ರಾ. ಗೌರಿ ಶ್ರೀವಾಸ್ತವ ಇವರ ಸಹಿ ಇದೆ.