ಈ ತನಿಖೆಯಿಂದ ನಿಜವಾದ ಅಪರಾಧಿಗಳು ಸಿಗಲಿ ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
ಅಮರಾವತಿ (ಆಂಧ್ರಪ್ರದೇಶ) – ರಾಜ್ಯದ ದೇವಾಲಯಗಳ ಮೇಲಿನ ದಾಳಿಗಳ ತನಿಖೆಗಾಗಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ೧೬ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸೆಪ್ಟೆಂಬರ್ ೨೦೨೦ ರಿಂದ ನಡೆಯುತ್ತಿರುವ ದಾಳಿಗ ಬಗ್ಗೆ ತಂಡ ತನಿಖೆ ನಡೆಸಲಿದೆ. ಭ್ರಷ್ಟಾಚಾರ ನಿಗ್ರಹ ಇಲಾಖೆಯ ವಿಜಯವಾಡ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಅಶೋಕ ಕುಮಾರ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ತಂಡವು ನೇರವಾಗಿ ಮುಖ್ಯಮಂತ್ರಿಗೆ ವರದಿಯನ್ನು ಸಲ್ಲಿಸಲಿದೆ. ತಂಡ ೧ ಪೊಲೀಸ್ ವರಿಷ್ಠಾಧಿಕಾರಿ, ೨ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೨ ಉಪ ಅಧೀಕ್ಷಕರು, ೨ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಇತರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ದೇವಾಲಯಗಳ ಮೇಲಾಗುತ್ತಿರುವ ದಾಳಿ ಮತ್ತು ಮೂರ್ತಿ ಭಂಜನೆಯ ಘಟನೆಗಳು ರಾಜ್ಯದಲ್ಲಿ ಧಾರ್ಮಿಕ ಶಾಂತಿಗೆ ಭಂಗ ತಂದಿವೆ, ಆದ್ದರಿಂದ ತನಿಖಾ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯಲ್ಲಿರುವ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ಸೌಲಭ್ಯ ಕಲ್ಪಿಸುವಂತೆ ಆದೇಶಿಸಲಾಗಿದೆ. ಸಮಿತಿಗೆ ಸಹಾಯ ಮಾಡುವಂತೆ ಗೂಢಚರ ಇಲಾಖೆಯನ್ನು ಆದೇಶಿಸಲಾಗಿದೆ. ತಂಡವು ದಾಳಿಯ ವಿಧಾನವನ್ನು ಅಧ್ಯಯನ ಮಾಡಿ ತನಿಖೆ ಮಾಡಲಿದೆ.
ದೇವಾಲಯಗಳಿಗೆ ಶಿಲಾನ್ಯಾಸ ಮತ್ತು ಭೂಮಿಪೂಜೆ ಮಾಡಿದ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ
ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯವರು ವಿಜಯವಾಡದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಇವುಗಳಲ್ಲಿ ಅಂಜನೇಯ ಸ್ವಾಮಿ, ರಾಹು-ಕೇತು, ಸೀತಮ್ಮಾವರಿ ಮತ್ತು ವೇಣುಗೋಪಾಲ ದೇವಾಲಯಗಳು ಸೇರಿವೆ. ಅಲ್ಲದೆ, ಮುಖ್ಯಮಂತ್ರಿ ರೆಡ್ಡಿಯವರು ಕನಕದುರ್ಗ ದೇವಸ್ಥಾನ ಪ್ರದೇಶದ ೮ ದೇವಾಲಯಗಳ ಭೂಮಿ ಪೂಜೆಯನ್ನು ಮಾಡಿದರು. ಇದಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡುವವರಿದ್ದಾರೆ. ಜನವರಿ ೩ ರಂದು ವಿಜಯವಾಡದ ಸೀತಾರಾಮ ದೇವಸ್ಥಾನದಲ್ಲಿರುವ ಸೀತಾ ದೇವಿಯ ಮೂರ್ತಿಯನ್ನು ಅಜ್ಞಾತರು ಒಡೆದುಹಾಕಿದ್ದರು.


ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!