ಪುದುಚೇರಿಯಲ್ಲಿ ದೇವಾಲಯಕ್ಕೆ ನುಗ್ಗಿದ ಮತಾಂಧನು ಫೇಸ್ಬುಕ್ ಲೈವ್ ನಲ್ಲಿ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ

ಪೊಲೀಸರಿಂದ ಬಂಧನ

  • ಹಿಂದೂಗಳ ದೇವಾಲಯಗಳನ್ನು ರಕ್ಷಿಸುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಇಲ್ಲಿಯವರೆಗೆ ರಾತ್ರಿಯಲ್ಲಿ ರಹಸ್ಯವಾಗಿ ದೇವಾಲಯಗಳಿಗೆ ಪ್ರವೇಶಿಸುವ ಮೂಲಕ ವಿಗ್ರಹಗಳನ್ನು ಧ್ವಂಸ ಮಾಡಲಾಗುತ್ತಿತ್ತು, ಈಗ ನೇರವಾಗಿ ದೇವಾಲಯಕ್ಕೆ ನುಗ್ಗಿ ದೇವತೆಗಳನ್ನು ನಿಂದಿಸುತ್ತಾರೆ, ನಾಳೆ ಹಾಡು ಹಗಲೇ ಧ್ವಂಸ ಮಾಡುವ ಧೈರ್ಯ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ !

  • ಈ ಘಟನೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಹಿಂದೂಗಳು ದಿನದ ೨೪ ಗಂಟೆಯೂ ದೇವಾಲಯಗಳನ್ನು ರಕ್ಷಿಸುವುದರ ಜೊತೆಗೆ ಈಗ ಹಿಂದೂ ರಾಷ್ಟ್ರ ಸ್ಥಾಪಿಸಲು ಒಂದಾಗಬೇಕು !

ಪುದುಚೇರಿ – ಇಲ್ಲಿಯ ಕಾರೈಕಲ್‌ನ ಪೆರುಮಾಲ ಕೋವಿಲ ಮಾರ್ಗದಲ್ಲಿರುವ ಪರ್ವತೀಸ್ವರಾರ ದೇವಸ್ಥಾನಕ್ಕೆ ಮಂಜೂರ ಅಲಿ ಎಂಬ ಮತಾಂಧನು ಪ್ರವೇಶಿಸಿ ಚಿತ್ರ ತೆಗೆಯಲು ಮತ್ತು ಚಿತ್ರೀಕರಣ ಮಾಡಲು ಪ್ರಾರಂಭಿಸಿದ. ನಂತರ ಆತ ಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಪ್ರಾರಂಭಿಸಿದ. ಆತ ಈ ಘಟನೆಯನ್ನು ‘ಫೇಸ್‌ಬುಕ್’ನಲ್ಲಿ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ.

ದೇವಾಲಯದಲ್ಲಿದ್ದ ಪುರೋಹಿತರು ಮತ್ತು ಭಕ್ತರು ಆತನನ್ನು ತಡೆಯಲು ಪ್ರಯತ್ನಿಸಿದಾಗ ಆತ ಅವರಿಗೂ ಬೈಗುಳ ನೀಡಿದನು. ಆದ್ದರಿಂದ ಪುರೋಹಿತರು ಪೊಲೀಸರನ್ನು ಕರೆದರು. ನಂತರ ಮಂಜೂರ ಅಲಿಯನ್ನು ಬಂಧಿಸಲಾಯಿತು. ಜೊತೆಗೆ ಆತನ ಮೊಬೈಲ್ ಫೋನ್ ಕೂಡ ಮುಟ್ಟುಗೋಲು ಹಾಕಿಕೊಂಡರು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.