‘ಯುವಕರಿಗೆ ನೌಕರಿ ಸಿಗದಿದ್ದರೆ, ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದರ ಹೊರತು ಬೇರೆ ಆಯ್ಕೆ ಇರಲಾರದು!’(ವಂತೆ) – ಮೆಹಬೂಬಾ ಮುಫ್ತಿಯವರಿಂದ ಪ್ರಚೋದನೆ

  • ಕಾಶ್ಮೀರದ ಹಿಂದೂಗಳಿಗೆ ಮಸೀದಿಯಿಂದ ಬೆದರಿಕೆ ನೀಡಿ ರಾಜ್ಯದಿಂದ ಪಲಾಯನವನ್ನು ಅನಿವಾರ್ಯಗೊಳಿಸಿದಾಗ ಅಥವಾ ಅವರ ಅವರ ವಂಶ ಸಂಹಾರ ಮಾಡಿದಾಗಲೂ ಇಂದಿನ ತನಕದ ೩೦ ವರ್ಷಗಳಲ್ಲಿ ಒಬ್ಬನೇ ಒಬ್ಬ ಕಾಶ್ಮೀರಿ ಹಿಂದೂವು ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡಿಲ್ಲ; ಆದರೆ ಕೇವಲ ನೌಕರಿ ಸಿಗಲಿಲ್ಲವೆಂಬ ಕಾರಣ ಮುಂದಿಟ್ಟು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಭಾಷೆಯನ್ನಾಡುವ ಮೆಹಬೂಬಾ ಮುಫ್ತಿಯ ನಿಜವಾದ ಮಾನಸಿಕತೆ ಇಲ್ಲಿ ಗಮನಕ್ಕೆ ಬರುತ್ತದೆ !

  • ಮೆಹಬೂಬಾ ಮುಫ್ತಿಯವರು ಗೃಹಬಂಧನದಿಂದ ಬಿಡುಗಡೆಯಾದಾಗಿನಿಂದ, ಇದೇ ರೀತಿಯ ಕಾನೂನು ವಿರೋಧಿ ಮತ್ತು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಅವರಿಗೆ ಆಜನ್ಮ ಕಾರಾಗೃಹವಾಸದ ಶಿಕ್ಷೆ ನೀಡುವ ಅವಶ್ಯಕತೆಯಿದೆ, ಎಂಬುದು ಗಮನಕ್ಕೆ ಬರುತ್ತದೆ !

  • ಯುವಕರ ಮನಸ್ಸಿನಲ್ಲಿ ಇಲ್ಲದ ವಿಚಾರವನ್ನು ಈ ರೀತಿಯಲ್ಲಿ ತುರುಕಲು ಮೆಹಬೂಬಾ ಮುಫ್ತಿಯವರು ಪ್ರಯತ್ನಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು – ಕಾಶ್ಮೀರ) – ಯುವಕರಿಗೆ ಉದ್ಯೋಗ ಸಿಗದಿದ್ದರೆ, ಅವರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದೊಂದೇ ದಾರಿ(ಪರ್ಯಾಯ), ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖಂಡೆ ಮತ್ತು ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.

ಮೆಹಬೂಬಾ ಮುಫ್ತಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ೩೭೦ ನೇ ವಿಧಿ(ಕಲಂ) ಯನ್ನು ತೆಗೆದ ನಂತರ ಬಿಜೆಪಿ ಸರಕಾರವು ಜಮ್ಮುವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಜಮ್ಮು – ಕಾಶ್ಮೀರ ಮತ್ತು ಲಡಾಖ್‌ನ ಜನರನ್ನು ತಮ್ಮ ಭೂಮಿ ಮತ್ತು ಉದ್ಯೋಗದ ಅಧಿಕಾರದಿಂದ ವಂಚಿತರಾಗಿಸಿದ್ದಾರೆ. (ಎಷ್ಟೇ ಸುಳ್ಳುಗಳನ್ನು ಹೇಳಿದರೂ, ನಿಜ ಏನು ಎಂದು ಭಾರತೀಯ ಜನತೆಗೆ ತಿಳಿದಿದೆ. – ಸಂಪಾದಕ)

೨. ಭಾರತಕ್ಕೆ ಚೀನಾದೊಂದಿಗೆ ಮಾತುಕತೆ ನಡೆಸಲು ಸಾಧ್ಯವಿದೆ, ಹಾಗಾದರೆ, ಅದು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಏಕೆ ಸಾಧ್ಯವಿಲ್ಲ ? (ಪಾಕಿಸ್ತಾನ ಚರ್ಚೆಗೆ ಮೀರಿದ ದೇಶವಾಗಿದೆ. ಆದ್ದರಿಂದ ಅದಕ್ಕೆ ಚರ್ಚೆಯಲ್ಲ, ಶಸ್ತ್ರಾಸ್ತ್ರಗಳ ಭಾಷೆ ತಿಳಿಯುತ್ತದೆ, ಎಂದು ಮೆಹಬೂಬಾ ಮುಫ್ತಿ ನೆನಪಿನಲ್ಲಿಡಬೇಕು ! ಪಾಕಿಸ್ತಾನವನ್ನು ಎತ್ತಿಕಟ್ಟುವ ಮೆಹಬೂಬಾರ ವಿರುದ್ಧ ದೇಶದ್ರೋಹದ ಆರೋಪವನ್ನು ನೊಂದಾಯಿಸಬೇಕು ! – ಸಂಪಾದಕ)

೩. ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅವರು, ‘ನಾನು ತೇಜಸ್ವಿ ಯಾದವರನ್ನು ಅಭಿನಂದಿಸಲು ಬಯಸುತ್ತೇನೆ ಏಕೆಂದರೆ ಅವರು ಚಿಕ್ಕವರಾಗಿದ್ದರೂ, ಅವರು ಬಿಹಾರದಲ್ಲಿ ಆಹಾರ, ಬಟ್ಟೆ, ಉದ್ಯೋಗ, ಆಶ್ರಯ ಇತ್ಯಾದಿಗಳ ಬಗ್ಗೆ ನಿಲುವು ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು. ಕಲಂ ೩೭೦, ೩೫ ಎ, ಭೂ ಖರೀದಿಯ ವಿಷಯವನ್ನು ನಡೆಸಲು ಬಿಡಲಿಲ್ಲ, ಎಂದರು

೪. ಅಮೆರಿಕದಲ್ಲಿ ಟ್ರಂಪ್‌ರಿಗೆ ಏನಾಯಿತು ಅದೇ ಬಿಜೆಪಿ ಮತ್ತು ಮೋದಿಯವರ ಬಗ್ಗೆಯೂ ಸಂಭವಿಸಲಿದೆ ಎಂದೂ ಹೇಳಿದರು.