ಹಿಂದೂ ಹೆಸರು ಹೇಳಿ ಮತಾಂಧನಿಂದ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅತ್ಯಾಚಾರ

ಮದುವೆಗೆ ಮತಾಂತರಗೊಳ್ಳುವಂತೆ ಒತ್ತಡ

  • ಪ್ರೀತಿಗಾಗಿ ಹಿಂದೂ ಹೆಸರನ್ನು ಇಟ್ಟುಕೊಂಡು ಮೋಸ ಮಾಡುವುದನ್ನು ಪ್ರೀತಿಯೆಂದು ಹೇಳದೇ ಇದಕ್ಕೆ ‘ಲವ್ ಜಿಹಾದ್’ ಎನ್ನುತ್ತಾರೆ, ಇದನ್ನು ಎಂದಿಗೂ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಒಪ್ಪುವುದಿಲ್ಲ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

  • ಹಿಂದೂಗಳೇ, ಹಿಂದೆ ಮತಾಂಧರಿಂದ ಹಿಂದೂ ಹುಡುಗಿಯರನ್ನು ಅತ್ಯಾಚಾರ ಅಥವಾ ಹತ್ಯೆ ಮಾಡಿದ ಘಟನೆಗಳು ತಿಂಗಳಲ್ಲಿ ಒಂದು ದಿನ ನಡೆಯುತ್ತಿದ್ದವು. ಈಗ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಭವಿಷ್ಯದಲ್ಲಿ ಪ್ರತಿ ಗಂಟೆಗೆ ನಡೆಯಬಹುದಾದ ಇಂತಹ ಘಟನೆಗಳಿಂದ ತಾಯಂದಿರು ಮತ್ತು ಸಹೋದರಿಯರನ್ನು ಉಳಿಸಲು ಸಂಘಟಿತರಾಗಿ !

ಪಾಲವಲ್ (ಹರಿಯಾಣ) – ಸಾಜಿದ್ ಎಂಬ ಮತಾಂಧ ಯುವಕನು ತನ್ನ ಹೆಸರು ‘ರಾಹುಲ್’ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಸೆಳೆದು ಅವಳ ಮೇಲೆ ಅತ್ಯಾಚಾರ ಮಾಡಿದನು. ಹುಡುಗಿ ಮದುವೆಯ ಬಗ್ಗೆ ಕೇಳಿದಾಗ, ‘ನನ್ನ ಹೆಸರು ಸಾಜಿದ್ ಆಗಿದ್ದು ಇಸ್ಲಾಂಗೆ ಮತಾಂತರಗೊಂಡರೆ ನಾನು ನಿನನ್ನು ಮದುವೆಯಾಗುತ್ತೇನೆ’ ಎಂದು ಹೇಳಿದ. ಇದಾದ ನಂತರ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದಳು. ಪೊಲೀಸರು ಸಾಜಿದ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾಜಿದ್ ಬಾಲಕಿಯನ್ನು ಅಪಹರಿಸಿ ತನ್ನ ಹಳ್ಳಿಯಲ್ಲಿ ಒಂದು ತಿಂಗಳು ಇಟ್ಟುಕೊಂಡಿದ್ದ. ಅಲ್ಲಿ ಅವನು ಅವಳ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದನು. ಅವನು ಇಸ್ಲಾಂಗೆ ಮತಾಂತರಗೊಳ್ಳಬೇಕೆಂದು ಹೇಳಿದಾಗ ಅವಳು ಅಲ್ಲಿಂದ ಓಡಿ ಬಂದಳು.

ಪೊಲೀಸರಿಂದ ದೂರು ನೊಂದಾಯಿಸಲು ದುರ್ಲಕ್ಷ

ಇಂತಹ ಪೊಲೀಸರು ಭಾರತದ್ದಾಗಿದ್ದಾರೆಯೇ ಅಥವಾ ಪಾಕಿಸ್ತಾನದ್ದಾಗಿದ್ದಾರೆಯೇ ? ಇಂತಹ ಪೊಲೀಸರಿಗೆ ಕೆಲಸದಿಂದ ವಜಾ ಮಾಡಿ ಸೆರೆಮನೆಗೆ ತಳ್ಳಬೇಕು !

ಪೊಲೀಸರಲ್ಲಿ ದೂರು ನೀಡಲು ಯತ್ನಿಸುತ್ತಿದ್ದಾಗ, ಪೊಲೀಸರು ದೂರನ್ನು ಕೇಳುವುದನ್ನು ದುರ್ಲಕ್ಷಿಸಿ ಬಾಲಕಿಯನ್ನು ಹೊರಗಟ್ಟಲು ಪ್ರಯತ್ನಿಸಿದರು. ವಿವಾದ ಉಲ್ಬಣಗೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯೊಂದಿಗೆ ರಾಜಿ ಮಾಡಿಕೊಂಡಿದ್ದರಿಂದ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಈ ಕಾರಣದಿಂದಾಗಿ ಕೆಲವು ಹಿಂದೂತ್ವನಿಷ್ಠ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಭಜರಂಗದಳದ ರಾಜ್ಯ ಅಧ್ಯಕ್ಷ ಮುನೀಶ್ ಭರದ್ವಾಜ್ ಇವರು, ಪೀಡಿತೆಯು ತನ್ನ ಕುಟುಂಬದವರೊಂದಿಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಅವರನ್ನು ಪ್ರವೇಶಿಸಲು ಅನುಮತಿಸಲಿಲ್ಲ . ಅಂತಹ ಪೊಲೀಸರನ್ನು ಅಮಾನತುಗೊಳಿಸಬೇಕು ಹಾಗೂ ಆರೋಪಿ ಸಾಜಿದ್‌ನನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.