|
ಭರತಪುರ (ರಾಜಸ್ಥಾನ) – ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಚತುಷ್ಚಕ್ರ ವಾಹನದಲ್ಲಿ ದನಗಳ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು; ಆದರೆ ಪೊಲೀಸರು ಅದರತ್ತ ದುರ್ಲಕ್ಷ ಮಾಡಿದ್ದರಿಂದ ಗೋ ಕಳ್ಳಸಾಗಣೆ ಮಾಡುವವರು ಹಸುವನ್ನು ತೆಗೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಕುಮಾರ ಸಿಂಗ್ ಅವರು ಪೊಲೀಸರಿಗೆ ಕರೆ ಮಾಡಿದಾಗ, ಅವರು ಸಿಂಗ್ ಅವರನ್ನು ಗೇಲಿ ಮಾಡಲು ಪ್ರಾರಂಭಿಸಿದರು. ಈ ಗೋಕಳ್ಳಸಾಗಣೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ೩ ಗೋ ಕಳ್ಳರು ಹಸುವನ್ನು ಹಿಡಿದು ಚತುಷ್ಚಕ್ರ ವಾಹನದಲ್ಲಿ ಹಾಕುತ್ತಿರುವುದು ಕಾಣಿಸುತ್ತದೆ. ಅಕ್ಟೋಬರ್ ೯ ರಂದು ಈ ಘಟನೆಯು ನಡೆದಿದೆ.