ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಸರಕಾರಿ ಸಂಸ್ಥೆಗಳಿಂದಲೇ ಹಿಂದೂಗಳ ದೇವತೆಗಳ ಈ ರೀತಿ ಅವಮಾನವಾಗುವುದು ಖೇದಕರವಾಗಿದೆ ! ಸರಕಾರವು ಇತರ ಪಂಥೀಯರ ಶ್ರದ್ಧಾಸ್ಥಾನಗಳ ಉತ್ಸವಗಳಲ್ಲಿ ಈ ರೀತಿ ಕಸದ ವಾಹನವನ್ನು ಬಳಸುವ ಧೈರ್ಯ ತೋರಿಸುತ್ತಿತ್ತೇ ?

ಜಬಲಪುರ (ಮಧ್ಯಪ್ರದೇಶ) – ಇಲ್ಲಿಯ ಪುರಸಭೆಯ(ಮುನಿಸಿಪಾಲಿಟಿ) ಆಡಳಿತವರ್ಗದವರು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಕಸದ ವಾಹವನ್ನು ಉಪಯೋಗಿಸುತ್ತಿದ್ದರು. ಇದನ್ನು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸುತ್ತಾ ಆ ವಾಹನವನ್ನು ತಡೆಗಟ್ಟಿದರು. ಆಡಳಿತವು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಕಸದ ವಾಹನವನ್ನು ಉಪಯೋಗಿಸಲಾಗುತ್ತಿರುವ ವಿಷಯವು ಹಿಂದುತ್ವನಿಷ್ಠ ವಿಕಾಸ ಖರೆ ಇವರಿಗೆ ಸಿಕ್ಕಿತು. ಅವರು ಈ ವಿಷಯವನ್ನು ಹಿಂದೂ ಮಹಾಸಭೆಯ ಪಂ. ಅಮಿರ ಖಂಪರಿಯಾ ಹಾಗೂ ಹಿಂದೂ ಧರ್ಮ ಸೇನೆಯ ಯೋಗೇಶ ಅಗ್ರವಾಲ ಇವರಿಗೆ ತಿಳಿಸಿದರು. ಇವರೆಲ್ಲರು ಜಿಲ್ಲಾ ಬಾರ ಅಧ್ಯಕ್ಷ ಸುಧೀರ ನಾಯಕ ಹಾಗೂ ಆಭರಣ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಆನಂದ ಮೋಹನ ಪಾಠಕ ಇವರೊಂದಿಗೆ ಆ ವಾಹನದ ಎದುರಿಗೆ ಹೋಗಿ ಕುಳಿತು ವಾಹನವನ್ನು ನಿಲ್ಲಿಸಿದರು.
ಈ ಸಮಯದಲ್ಲಿ ಪಂ. ಅಮಿರ ಖಂಪರಿಯಾ ಇವರು, “ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹಿಂದೂ ಧರ್ಮದ ಮಾನ್ಯತೆಗನುಸಾರ ಬಾಳೆ ಎಲೆ, ಹೂವಿನ ಹಾರ ಇತ್ಯಾದಿಗಳೊಂದಿಗೆ ಸಂಪೂರ್ಣ ಸ್ವಚ್ಛವಾಗಿರುವ ವಾಹನವನ್ನು ಉಪಯೋಗಿಸಬೇಕು”, ಎಂದು ಹೇಳಿದರು. ಯೊಗೇಶ ಅಗ್ರವಾಲ ಇವರು ‘ಶ್ರೀಗಣೇಶನ ಈ ರೀತಿಯಲ್ಲಿ ಅವಮಾನವಾಗುವುದನ್ನು ನಾವು ಸಹಿಸುವುದಿಲ್ಲ, ಅದೇ ರೀತಿ ಏನೇ ಆದರೂ, ಸನಾತನ ಧರ್ಮದಲ್ಲಿ ಹೇಳಿರುವಂತಹ ವಿಷಯಗಳ ವಿರುದ್ಧ ಕೃತಿ ಹಾಗೂ ಹಿಂದುತ್ವದ ವಿರೋಧವನ್ನೂ ನಾವು ಸಹಿಸುವುದಿಲ್ಲ’, ಎಂದು ಆಡಳಿತದವರಿಗೆ ಎಚ್ಚರಿಕೆಯನ್ನು ನೀಡಿದರು. ಈ ಸಮಯದಲ್ಲಿ ಅರ್ಜುನ ನಾಮದೇವ, ಅಂಕಿತ ಶ್ರೀವಾಸ್ತವ, ನೀರಜ ರಾಜಪುತ, ಸುಧಾಕರ ಮಿಶ್ರಾ, ಬಬಲು ಪಂಡಾ ಇನ್ನಿತರ ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ