ಕೇವಲ ಭೂಕಂಪ ನಿರೋಧಕ ಮಾತ್ರವಲ್ಲದೇ, ಮತಾಂಧರ ವಿರೋಧದಿಂದಲೂ ರಕ್ಷಣೆಯಾಗಲು ಹಿಂದೂಗಳು ಪ್ರಯತ್ನಿಸಬೇಕು!
ಅಯೋಧ್ಯೆ (ಉತ್ತರಪ್ರದೇಶ)- ಇಲ್ಲಿ ನಿರ್ಮಿಸಲಾಗುವ ಶ್ರೀರಾಮಮಂದಿರವು ಬಲವಾದ ಭೂಕಂಪವನ್ನೂ ಎದುರಿಸಬಲ್ಲದಂತೆ ನಿರ್ಮಿಸಲಾಗುವುದು. ಈ ದೇವಸ್ಥಾನವು ಕಡಿಮೆ ಪಕ್ಷ ೨ ಸಾವಿರ ವರ್ಷಗಳ ತನಕ ಸಹಜವಾಗಿ ಬಾಳಿಕೆ ಬರುವುದು, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಹೇಳಿದರು. ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ದೇವಸ್ಥಾನದ ಅಡಿಪಾಯ ೨೦೦ ಅಡಿಯಷ್ಟು ಆಳವಿರಲಿದೆ.
![](https://static.sanatanprabhat.org/wp-content/uploads/sites/5/2020/07/28195748/ram.jpg)
ಚಂಪತ ರಾಯ ಅವರು ಮುಂದಿನಂತೆ ಹೇಳಿದ್ದಾರೆ,
೧. ದೊಡ್ಡ ದೊಡ್ಡ ನದಿಗಳ ಮೇಲೆ ಕಟ್ಟಿರುವ ಸೇತುವೆಗಳ ಕಂಬದಂತೆಯೇ ಈ ದೇವಸ್ಥಾನದ ಕಂಬವು ಗಟ್ಟಿಮುಟ್ಟಾಗಿರುವುದು ಹಾಗೂ ಅದನ್ನು ಆಳವಾಗಿ ಅಗೆದು ಕಟ್ಟಲಾಗುವುದು. ಆದ್ದರಿಂದ ಯಾವುದೇ ನೈಸರ್ಗಿಕ ವಿಪತ್ತುಗಳನ್ನು ಎದುರಿಸುತ್ತ ದೇವಸ್ಥಾನ ಸಾವಿರಾರು ವರ್ಷಗಳವರೆಗೆ ಸಹಜವಾಗಿ ಬಾಳಿಕೆ ಬರುವುದು.
೨. ಅಡಿಪಾಯಕ್ಕಾಗಿ ಅಗೆಯುವ ಕೆಲಸ ಆರಂಭವಾಗಿದ್ದು ಸದ್ಯ ಮಳೆಗಾಲ ಇರುವುದರಿದ ಅದು ೧-೨ ತಿಂಗಳಲ್ಲಿ ಪೂರ್ಣವಾಗಲಿದೆ. ಅಡಿಪಾಯ ಅಗೆಯುವ ನೀಲನಕ್ಷೆ ‘ಐಐಟಿ ಚೆನ್ನೈ’ ನಿರ್ಮಿಸಿದೆ; ಆದರೆ ಅದು ನಮ್ಮ ತನಕ ತಲುಪಿಲ್ಲ. ಧಾರ್ಮಿಕ ಪರಂಪರೆಯನ್ನು ಪಾಲಿಸುತ್ತಾ ‘ದೇವಸ್ಥಾನದ ನೆರಳು ಭೂಮಿಯ ಮೇಲೆ ಬೀಳದಂತೆ’ ನೋಡಿಕೊಳ್ಳಲಾಗುವುದು.
೩. ‘ಟ್ರಸ್ಟ್’ನ ಇಲಾಖೆಯಲ್ಲಿ ಸದ್ಯ ೪೨ ಕೋಟಿ ಜಮೆಯಾಗಿದೆ. ಈ ಹಣ ಲಕ್ಷಗಟ್ಟಲೆ ಜನರು ನೀಡಿದ ಒಂದು ರೂಪಾಯಿಯಿಂದ ಒಂದು ಕೋಟಿ ರೂಪಾಯಿಯ ದೇಣಿಗೆಯ ತನಕ ಜಮೆಯಾಗಿದೆ ಎಂದು ಹೇಳಿದ್ದಾರೆ.