ಇಸ್ರೇಲ್ ಪ್ರಧಾನಿ ಬೆಂಜಾಮಿನ ನೆತಾನ್ಯಾಹುನ ಮಗನಿಂದ ಶ್ರೀ ದುರ್ಗಾದೇವಿಯ ಅವಮಾನ ; ಭಾರತೀಯರ ವಿರೋಧದ ನಂತರ ಕ್ಷಮೆ ಯಾಚನೆ

ಜೆರುಸಲೇಮ್ – ಇಸ್ರೇಲ್‌ನ ಪ್ರಧಾನಿ ಬೆಂಜಾಮಿನ ನೆತನ್ಯಾಹುನ ೨೯ ವರ್ಷದ ಮಗ ಯಾಯರನು ಟ್ವೀಟ್ ಮೂಲಕ ಶ್ರೀ ದುರ್ಗಾದೇವಿಯ ವಿಡಂಬನಾತ್ಮಕ ಚಿತ್ರ ಪ್ರಸಾರ ಮಾಡಿ ದೇವಿಯ ಅವಮಾನ ಮಾಡಿದ್ದನು. ಇದಕ್ಕೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ತೀವ್ರವಾಗಿ ಆಕ್ಷೇಪಿಸುತ್ತ ಈ ಚಿತ್ರವನ್ನು ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಅದಕ್ಕೆ ಯಾಯರನು ಈ ವಿಡಂಬನಾತ್ಮಕ ಚಿತ್ರವನ್ನು ತೆಗೆದು ಹಾಕಿ ಭಾರತೀಯರಲ್ಲಿ ಕ್ಷಮೆ ಯಾಚನೆ ಮಾಡಿದನು.

ಯಾಯರನು ಟ್ವೀಟ್ ಮಾಡಿದ ಶ್ರೀ ದುರ್ಗಾದೇವಿಯ ಚಿತ್ರದಲ್ಲಿ ದೇವಿಯ ಮುಖದ ಬದಲಾಗಿ ಲಿಯೆಟ್ ಬೆನ್ ಎರಿಯ ಮುಖವನ್ನು ಹಾಕಿದ್ದ. ಎರಿ ಬೆಂಜಾಮಿನ ನೇತನ್ಯಾಹುವಿನ ಮೇಲೆ ನಡೆಯುತ್ತಿರುವ ಭ್ರಷ್ಟಾಚಾರದ ಖಟ್ಲೆಯ ನ್ಯಾಯವಾದಿಯಾಗಿದ್ದಾರೆ. ಯಾಯರನು, ‘ನಾನು ಈ ಚಿತ್ರವನ್ನು ಜಾಲತಾಣದಿಂದ ತೆಗೆದುಕೊಂಡಿದ್ದೆ. ಈ ಚಿತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದರ ಬಗ್ಗೆ ನನಗೆ ಭಾರತೀಯ ಸ್ನೇಹಿತರಿಂದ ಪ್ರತಿಕ್ರಿಯೆ ಬಂದಾಗ ತಿಳಿಯಿತು. ತದನಂತರ ನಾನು ಆ ಚಿತ್ರವನ್ನು ಕೂಡಲೇ ತೆಗೆದು ಕ್ಷಮೆ ಯಾಚನೆ ಮಾಡಿದೆ ಎಂದು ಹೇಳಿದ್ದಾನೆ.