ಇಂತಹ ಬೇಹುಗಾರಿಕೆಯನ್ನು ಮಾಡುವ ಚೀನಾದ ರಾಯಭಾರಿ ಕಛೇರಿಯನ್ನು ಭಾರತದಿಂದ ಹೊರದಬ್ಬುವುದು ಅಪೇಕ್ಷಿತವಿದೆ !
ವಾಶಿಂಗಟನ್ – ಹೊಸ್ಟನ್ನಲ್ಲಿಯ ಚೀನಾದ ವಾಣಿಜ್ಯ ರಾಯಭಾರಿ ಕಛೇರಿಯು ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು. ಈ ರಾಯಭಾರಿ ಕಛೇರಿಯಿಂದ ಬೆಹುಗರಿಕೆಯೊಂದಿಗೆ ಬೌದ್ಧಿಕ ಸಂಪತ್ತಿನ ಕಳ್ಳತನವನ್ನೂ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದೆವು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಒ ಮಾಹಿತಿ ನೀಡಿದರು. ಅಂತರರಾಷ್ಟ್ರೀಯ ಕಾನೂನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಿನ ೮ ವರ್ಷಗಳಿಗಾಗಿ ಚೀನಾ ಸಾಗರದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ, ಎಂದು ಸಹ ಅವರು ಹೇಳಿದರು.
ಹೀಗೆ ಮಾಡದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಚೀನಾದ ಅಧೀನದಲ್ಲಿಯೇ ಬದುಕಬೇಕಾಗಬಹುದು !
ಪಾಂಪಿಒ ತಮ್ಮ ಮಾತನ್ನು ಮುಂದುವರೆಸುತ್ತ, ‘ಒಂದು ವೇಳೆ ನಾವು ಚೀನಾದ ಎದುರು ಮಂಡಿಯೂರಿದರೆ ನಾಳೆ ನಮ್ಮ ಪಿಳಿಗೆಯು ಅವರ ಅಧೀನದಲ್ಲಿದ್ದು ಬದುಕ ಬೇಕಾಗುವುದು. ಚೀನಾದೊಂದಿಗೆ ನಾವೊಬ್ಬರೇ ಹೋರಾಡಲು ಸಾಧ್ಯವಿಲ್ಲ. ಅದನ್ನು ಎದುರಿಸಲು ಜಗತ್ತಿನಾದ್ಯಂತ ಸಮಾನ ವಿಚಾರವುಳ್ಳ ದೇಶಗಳು, ‘ಜೀ-೨೦ ರಾಷ್ಟ್ರಗಳು’, ಸಂಯುಕ್ತ ರಾಷ್ಟ್ರಗಳು ಹಾಗೂ ನಾಟೊಗಳು ಒಂದು ವೇದಿಕೆಗೆ ಮೇಲೆ ಬರಬೇಕು. ಅಂತರರಾಷ್ಟ್ರೀಯ ವ್ಯಾಪಾರವನ್ನು ವಿಸ್ತರಿಸುವ ಆಸೆಯಿಂದ ಚೀನಾವು ಜಗತ್ತಿನ ಎಲ್ಲ ಪ್ರಮುಖ ಜಲಮಾರ್ಗಗಳನ್ನು ಅಸುರಕ್ಷಿತಗೊಳಿಸಿದೆ” ಎಂದು ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation