-
ಹೀಗೇಕೆ ಆಗ್ರಹಿಸಬೇಕಾಗುತ್ತದೆ ? ಸರಕಾರ ತಾನಾಗಿ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?
-
‘ವೆಬ್ ಸಿರೀಸ್’ಗಳ ಪರಿವೀಕ್ಷಣೆಗೂ ಒತ್ತಾಯ

ನವ ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತಿ’ಯ ಅಖಿಲ ಭಾರತ ಪ್ರತಿನಿಧಿ ಕಾರ್ಯನಿರ್ವಾಹಕ ಸಭೆಯು ದೂರದರ್ಶನದಲ್ಲಿನ ಧಾರಾವಾಹಿಯಿಂದ ದ್ವೇಷಪೂರಿತ ಹಿಂಸಾಚಾರ, ಲೈಂಗಿಕತೆ, ನಗ್ನತೆ ಮತ್ತು ಭಾರತೀಯ ಸೈನಿಕರ ಬಗ್ಗೆ ಅವಮಾನಕರ ‘ವಿಡಿಯೋ’ ಮಾಲಿಕೆ (ವೆಬ್ ಸಿರಿಸ್)ಗಳನ್ನು ಪ್ರಸಾರ ಮಾಡುವ ಬಗ್ಗೆ ತೀವ್ರವಾಗಿ ಖಂಡಿಸಿದೆ. ಕಾರ್ಯನಿರ್ವಾಹಕ ಸಭೆಯಲ್ಲಿ ಠರಾವನ್ನು ಜಾರಿಗೊಳಿಸುವ ಮೂಲಕ ಇಂತಹ ಮಾಲಿಕೆಗಳ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರಕಾರವು ತಕ್ಷಣ ಕಟ್ಟುನಿಟ್ಟಿನ ಕಾನೂನನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದೆ.
वेब सिरीज़ के माध्यम से सांस्कृतिक आक्रमण के बारे में अखिल भारतीय प्रबंध कारिणी द्वारा पारित प्रस्ताव….@NARENDER1970 @ArunKumRSS @SunilAmbekarMhttps://t.co/3myCJtfIXb
— Sanskar Bharti (@SBKendriya) June 12, 2020
೧. ‘ಸಂಸ್ಕಾರ ಭಾರತಿ’ಯು ಸ್ವಚ್ಛ ಮನೋರಂಜನೆಯನ್ನು ವಿರೋಧಿಸುತ್ತಿಲ್ಲ. ಅಪರಾಧ ಮತ್ತು ನಗ್ನತೆಯ ಕುರಿತ ಮಾಲಿಕೆಗಳನ್ನು ನಿರ್ಮಿಸುವ ಬದಲು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಪರಿಚಯಿಸುವ ಮಾಲಿಕೆಗಳನ್ನು ನಿರ್ಮಿಸುವಂತೆ ಈ ಸಂಸ್ಥೆಯ ವತಿಯಿಂದ ಮಾಲಿಕೆಯ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮನವಿ ಮಾಡಿದೆ.
೨. ‘ಸಂಸ್ಕಾರ ಭಾರತಿ’ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ ಚಂದ್ ಇವರು, ‘ವೆಬ್ ಸಿರೀಸ್’ನ ಪರಿವೀಕ್ಷಣೆ ಮಾಡಲು ಸರಕಾರವು ದಳವನ್ನು ರೂಪಿಸಬೇಕು. ಇದರಿಂದ ದೇಶದ ಯುವ ಪೀಳಿಗೆಗೆ ಯೋಗ್ಯವಾದಂತಹ ಮಾಲಿಕೆಗಳ ಪ್ರಸಾರವಾಗುವುದು ಮತ್ತು ಅದೇರೀತಿ ಈ ಮಾಲಿಕೆಗಳಲ್ಲಿ ಭಾಗವಹಿಸುವ ಕಲಾವಿದರು ಕೂಡ ಇದಕ್ಕಾಗಿ ಪ್ರಯತ್ನಿಸಬೇಕು’ ಎಂದು ಸಂಸ್ಕಾರ ಭಾರತಿ ಹೇಳಿದೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ