
ನವ ದೆಹಲಿ : ೧೯೮೭ ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾನಂದ ಸಾಗರ ಅವರ ಅತ್ಯಂತ ಜನಪ್ರಿಯ ಸರಣಿ ‘ರಾಮಾಯಣ’ದಲ್ಲಿ ಶುದ್ಧ ಹಿಂದಿ ಭಾಷೆಯನ್ನು ಬಳಸಲಾಯಿತು. ಪ್ರಸ್ತುತ, ಉರ್ದು ಮತ್ತು ಪರ್ಷಿಯನ್ ಪದಗಳನ್ನು ಹಿಂದಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಮಾತನಾಡುವ ಮತ್ತು ಬರೆಯುವಲ್ಲಿ ಬಳಸಲಾಗುತ್ತದೆ. ಇದನ್ನು ಮೊದಲು ಮಾಡಲಾಗಿತ್ತು; ಆದಾಗ್ಯೂ, ರಾಮಾಯಣದಲ್ಲಿ ೧೦೦% ಶುದ್ಧ ಹಿಂದಿ ಭಾಷೆಯನ್ನು ಬಳಸಲಾಯಿತು. ಈ ಸರಣಿಯಲ್ಲಿ ಲಕ್ಷ್ಮಣ ಪಾತ್ರದಲ್ಲಿ ನಟಿಸಿರುವ ಶ್ರೀ. ಸುನಿಲ್ ಲಹಾರಿ ಇವರು ‘ಆಜ್ ತಕ್’ ಎಂಬ ಸುದ್ದಿ ಚಾನೆಲ್ ಜೊತೆ ಮಾತನಾಡುವಾಗ ಈ ಮಾಹಿತಿಯನ್ನು ನೀಡಿದ್ದಾರೆ.

ಶ್ರೀ. ಲಹರಿ ಅವರು, “ರಾಮಾಯಣ ಸರಣಿಯ ಚಿತ್ರೀಕರಣದ ಮೊದಲು ನಾವು ಘಟನೆಗಳನ್ನು ಪೂರ್ವಾಭ್ಯಾಸ ಮಾಡುತ್ತಿದ್ದೇವೆ. ಆ ಸಮಯದಲ್ಲಿ ನಮಗೆ ನೀಡಿದ ಸಂಭಾಷಣೆಗಳು ಶುದ್ಧ ಹಿಂದಿ ಭಾಷೆಯಲ್ಲಿತ್ತು. ಶುದ್ಧ ಹಿಂದಿ ಮಾತನಾಡುವ ಅಭ್ಯಾಸ ನಮ್ಮಲ್ಲಿಲ್ಲದ ಕಾರಣ ಅದು ಕಷ್ಟಕರವಾಗುತ್ತಿತ್ತು. ಈ ಸಂಭಾಷಣೆ ಚಿತ್ರೀಕರಣದಲ್ಲಿ ಕಷ್ಟವಾಗಬಾರದು; ಆದ್ದರಿಂದ ನಾವು ಅದನ್ನು ಆಗಾಗ ಹೇಳುತ್ತೇವೆ. ಕೆಲವು ಪದಗಳನ್ನು ಹೇಳುವಲ್ಲಿ ನನಗೆ ತೊಂದರೆಯಾಗುತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ‘ಲೈವ್ ಶೂಟ್’ ಸಮಯದಲ್ಲಿ ಸಂಭಾಷಣೆಯಲ್ಲಿ ಮಾತನಾಡುವಾಗ ಉರ್ದು ಪದವು ಆಕಸ್ಮಿಕವಾಗಿ ನನ್ನ ಬಾಯಿಯಿಂದ ಜಾರಿದರೆ ಹೇಗೆ ?”, ಎಂದು ಭಯವಾಗುತ್ತಿತ್ತು.
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !