ಸಾಧಕರಿಗೆ ಮಹತ್ವದ ಸೂಚನೆ !

ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ದೊರಕಿರುವ ಸಂಜೀವಿನಿಯೇ ಆಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಉಪಾಯಗಳನ್ನು ಗಾಂಭೀರ್ಯದಿಂದ ಮಾಡಿರಿ !

ಈಗ ಕೊರೋನಾದಿಂದಾಗಿ ಎಲ್ಲೆಡೆ ಪ್ರತಿಕೂಲ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಸಮಯದಲ್ಲಿ ಎಲ್ಲ ಸಾಧಕರು ಪ್ರತಿದಿನ ಇಲ್ಲಿ ನೀಡಿರುವ ಆಧ್ಯಾತ್ಮಿಕ  ಉಪಾಯಗಳನ್ನು ನಿಯಮಿತವಾಗಿ ಆಗುವುದರತ್ತ ಗಮನ ಹರಿಸಬೇಕು.

೧. ನಾಮಜಪ

ಕೊರೋನಾದ ರೋಗಾಣುವಿನ ವಿರುದ್ಧ ನಮ್ಮ ಪ್ರತಿಕಾರ ಕ್ಷಮತೆ ಹೆಚ್ಚಿಸಲು ಆಧ್ಯಾತ್ಮಿಕ ಬಲ ಬರಲು, ಪೂ. ಡಾ. ಮುಕುಲ ಗಾಡಗೀಳ ಇವರು ನೀಡಿರುವ ನಾಮಜಪವನ್ನು ( ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ಗುರುದೇವ ದತ್ತ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಓಂ ನಮಃ ಶಿವಾಯ |) ಪ್ರತಿದಿನ ೧೦೮ ಬಾರಿ ಜಪಿಸಬೇಕು. ನಾಮಜಪ ಮಾಡಲು ಯಾವುದೇ ಬಂಧನ ಇರುವುದಿಲ್ಲ, ಮಾಸಿಕ ಸರದಿ ಇರುವ ಸಾಧಕಿಯರು, ಜನನ-ಮರಣದ ಸೂತಕ ಇರುವವರು ಈ ನಾಮಜಪ ಮಾಡಬಹುದು.

ಈ ನಾಮಜಪ https://www.sanatan.org/kannada/90924.html ಈ ಲಿಂಕ್‌ದಲ್ಲಿ ಲಭ್ಯವಿದೆ.

೨. ಸ್ತೋತ್ರ ಪಠಿಸುವುದು

ಆಪತ್ಕಾಲದಲ್ಲಿ ರಕ್ಷಣೆಯಾಗಲು ಪ್ರತಿದಿನ ಬೆಳಗ್ಗೆ ಚಂಡಿಕವಚ (ದೇವಿಕವಚ) ಕೇಳಿರಿ. ಶುಕ್ರವಾರ ದೇವಿತತ್ತ್ವ ಹೆಚ್ಚು ಇರುವುದರಿಂದ  ಬಗಲಾಮುಖಿ ದಿಗ್ಬಂಧನ ಸ್ತೋತ್ರ ಹಾಗೂ ಶನಿವಾರ ಮಾರುತಿತತ್ತ್ವ ಹೆಚ್ಚು ಪ್ರಮಾಣದಲ್ಲಿರುವುದರಿಂದ ಮಾರುತಿ ಸ್ತೋತ್ರ ಕೇಳಿರಿ.

ಚಂಡಿಕವಚ https://www.sanatan.org/kannada/4783.html ಈ ಲಿಂಕ್‌ದಲ್ಲಿ ಲಭ್ಯವಿದೆ.

ಬಗಲಾಮುಖಿ ದಿಗ್ಬಂಧನ ಸ್ತೋತ್ರ https://www.sanatan.org/kannada/90448.html ಈ ಲಿಂಕ್‌ದಲ್ಲಿ ಲಭ್ಯವಿದೆ.

೩. ಮಂತ್ರಜಪ : ನಮ್ಮ ಆಧ್ಯಾತ್ಮಿಕ ಬಲ ಹೆಚ್ಚಾಗಿ ‘ಕೊರೋನಾ ರೋಗಾಣುವಿನ ವಿರುದ್ಧ ಹೋರಾಡಲು ಪ್ರತೀಕಾರ ಕ್ಷಮತೆ ಹೆಚ್ಚಾಗಬೇಕೆಂದು ಪ್ರತಿದಿನ ೨ ಮಂತ್ರಜಪ ಹೇಳಲಾಗಿದೆ. ಇದರಲ್ಲಿ ಒಂದು ಮಂತ್ರಜಪ ಕೇಳಬೇಕು ಮತ್ತು ಇನ್ನೊಂದು ಮಂತ್ರಜಪವನ್ನು ತಾವೇ ಹೇಳಬೇಕು.

೩. ‘ರಕ್ಷಾಯಂತ್ರ’ ಮತ್ತು ರಾಮಕವಚ ಧಾರಣೆ ಮಾಡಿರಿ !

ಪರಾತ್ಪರ ಗುರು ಪಾಂಡೆ ಮಹಾರಾಜರ ಆಜ್ಞೆಯಂತೆ ಪ್ರತಿದಿನ ರಕ್ಷಾಯಂತ್ರವನ್ನು ಮತ್ತು ರಾಮಕವಚವನ್ನು ಧರಿಸಿರಿ. ರಕ್ಷಾಯಂತ್ರ ಮತ್ತು ರಾಮಕವಚದ ದಾರವನ್ನು, ತಾಯಿತದಲ್ಲಿ ಹಾಕಿರುವ ರಕ್ಷಾಯಂತ್ರವನ್ನು ಪ್ರತಿ ೨ ತಿಂಗಳಿಗೊಮ್ಮೆ ಬದಲಾಯಿಸಿ. ಹಳೆಯ ದಾರಗಳನ್ನು ಮತ್ತು ರಕ್ಷಾಯಂತ್ರವನ್ನು ಅಗ್ನಿಯಲ್ಲಿ ವಿಸರ್ಜಿಸಿ. ತಾಯಿತವನ್ನು ಬದಲಾಯಿಸುವ ಅವಶ್ಯಕತೆಯಿಲ್ಲ.

ರಕ್ಷಾಯಂತ್ರ ಮತ್ತು ಅದನ್ನು ಬಗ್ಗೆ ಪಾಲಿಸಬೇಕಾದ ಸೂಚನೆ https://www.sanatan.org/kannada/91081.html ಈ ಲಿಂಕ್‌ದಲ್ಲಿ  ಲಭ್ಯವಿದೆ.

ರಾಮಕವಚ ತಯಾರಿಸುವ ಸೂಚನೆ https://www.sanatan.org/kannada/91098.html ಈ ಲಿಂಕ್‌ದಲ್ಲಿ ಲಭ್ಯವಿದೆ.

೪. ಪ್ರತಿದಿನ ಊದುಬತ್ತಿಯಿಂದ ನಿರ್ಗುಣ ಪಟ್ಟಿಗಳನ್ನು ಶುದ್ಧೀಕರಿಸಿ ತಮ್ಮ ಸಹಸ್ರಾರ ಮತ್ತು ವಿಶುದ್ಧ ಚಕ್ರಗಳ ಮೇಲೆ ಹಚ್ಚಿರಿ.

೫. ಸಪ್ತಚಕ್ರಗಳಲ್ಲಿರುವ ಆವರಣವನ್ನು ತೆಗೆಯಿರಿ ! : ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ೧ ಗಂಟೆಗೊಮ್ಮೆ ಮತ್ತು ಇತರ ಸಾಧಕರು ೨ – ೩ ಗಂಟೆಗೊಮ್ಮೆ ಸಹಸ್ರಾರದಿಂದ ಸ್ವಾಧಿಷ್ಠಾನ ಚಕ್ರದ ಮೇಲಿನ ಕಪ್ಪು ಶಕ್ತಿಯ ಆವರಣವನ್ನು ೨ – ೩ ನಿಮಿಷಗಳ ಕಾಲ ತೆಗೆಯಬೇಕು. ಆವರಣವನ್ನು ಹೇಗೆ ತೆಗೆಯಬೇಕು ಎಂಬುದನ್ನು ಮುಂದೆ ನೀಡಲಾಗಿದೆ.

ಅ. ಶರೀರದಿಂದ ದೂರವಿರುವ ಆವರಣವನ್ನು ತೆಗೆಯಲು ಸಾತ್ತ್ವಿಕ ವಸ್ತು, ಉದಾ : ಸನಾತನ ಪ್ರಭಾತ, ನವಿಲು ಗರಿಯ ಗೊಂಚಲು, ಉರಿಸದ ಊದುಬತ್ತಿ ಮುಂತಾದವುಗಳನ್ನು ಉಪಯೋಗಿಸಬಹುದು.

ಆ. ಶರೀರದಿಂದ ತುಂಬಾ ಹತ್ತಿರದಿಂದ ಆವರಣವನ್ನು ತನ್ನ ಕೈಯಿಂದಲೇ ತೆಗೆಯಬೇಕು.

ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಶರೀರದಿಂದ ದೂರದ ಆವರಣವನ್ನು (‘ಅ ಅಂಶದಂತೆ) ಊದುಬತ್ತಿ ಅಥವಾ ಸನಾತನ ಪ್ರಭಾತದ ಸಹಾಯದಿಂದ ತೆಗೆಯಬೇಕು. ತೊಂದರೆ ಇಲ್ಲದವರು ಎರಡೂ ರೀತಿಯಲ್ಲಿ (‘ಅ ಮತ್ತು ‘ಆ ಈ ಅಂಶದಂತೆ) ಆವರಣವನ್ನು ತಮ್ಮ ಕೈಯಿಂದಲೇ ತೆಗೆಯಬೇಕು.

ನಂತರ ಭೀಮಸೇನಿ – ಕರ್ಪೂರದ ಸುಗಂಧವನ್ನು ತೆಗೆದುಕೊಂಡು ಉಪಾಯ ಮಾಡಬೇಕು. ಶ್ರೀಕೃಷ್ಣನಲ್ಲಿ ‘ನನ್ನ ದೇಹದ ಶುದ್ಧಿಯಾಗಿ ನನ್ನಲ್ಲಿ ಉತ್ಸಾಹ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಬೇಕು.ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ವಿಘ್ನಗಳನ್ನು ನಿರ್ಮಿಸಲು ಶತಪ್ರಯತ್ನಗಳನ್ನು ಮಾಡುತ್ತಿವೆ. ಆಪತ್ಕಾಲದಲ್ಲಿ ಈ ತೊಂದರೆಗಳು ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗುವುದಿಲ್ಲ, ಆದುದರಿಂದ ಎಲ್ಲ ಸಾಧಕರು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಅನಿವಾರ್ಯವಾಗಿದೆ.

ಸಾಧಕರೇ, ಸರ್ವಶಕ್ತಿವಂತ ಈಶ್ವರನು ನಮ್ಮೊಂದಿಗಿರುವುದರಿಂದ ಯಾವುದೇ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ಧೃತಿಗೆಡದೆ ಸ್ಥಿರವಾಗಿದ್ದು ಶ್ರದ್ಧೆಯಿಂದ ಎಲ್ಲ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ !

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೬.೪.೨೦೨೦)

ಸಾಧಕರು ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುವಾಗ ‘ಮೇಲಿನ ಆಧ್ಯಾತ್ಮಿಕ ಉಪಾಯಗಳು ಆಗುತ್ತಿವೆಯೇ ಎಂದು ಕೂಡ ವರದಿಯಲ್ಲಿ ಸೇರಿಸಿ ತಿಳಿಸಬೇಕು.