‘ಸಿವಿಲ್ ಸೊಸೈಟಿ ನೆಟ್ವರ್ಕ್ ಫಾರ್ ಹ್ಯೂಮನ್ ಟ್ರಾಫಿಕಿಂಗ್ ವಿಕ್ಟಿಮ್ ಅಸಿಸ್ಟೆನ್ಸ್’ ಸಂಸ್ಥೆಯ ಮಾಹಿತಿ
ಕೆಲಸದ ಆಮಿಷ ಒಡ್ಡಿ ವಂಚನೆ

ನವದೆಹಲಿ – ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಕುಖ್ಯಾತ ‘ಗೋಲ್ಡನ್ ಟ್ರಯಾಂಗಲ್’ ಪ್ರದೇಶದ ಸೈಬರ್ ವಂಚಕರ ಅಡ್ಡೆಗಳಲ್ಲಿ ವಿವಿಧ ದೇಶಗಳ ಸುಮಾರು ೫ ಸಾವಿರದ ೩೦೦ ನಾಗರಿಕರನ್ನು ಒತ್ತೆಯಾಳಾಗಿ ಇರಿಸಲಾಗಿದ್ದು, ಅದರಲ್ಲಿ ಸುಮಾರು ೮೦೦ ಭಾರತೀಯ ನಾಗರಿಕರು ಸೇರಿದ್ದಾರೆ. ಮಹಾರಾಷ್ಟ್ರದ ಕನಿಷ್ಠ ೨೫ ಯುವಕರು ಸಹ ಇದರಲ್ಲಿ ಸೇರಿದ್ದಾರೆ. ಬ್ಯಾಂಕಾಕ್ನಲ್ಲಿ ಉತ್ತಮ ಸಂಬಳದ ಕೆಲಸದ ಆಮಿಷ ಒಡ್ಡಿ ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
‘ಸಿವಿಲ್ ಸೊಸೈಟಿ ನೆಟ್ವರ್ಕ್ ಫಾರ್ ಹ್ಯೂಮನ್ ಟ್ರಾಫಿಕಿಂಗ್ ವಿಕ್ಟಿಮ್ ಅಸಿಸ್ಟೆನ್ಸ್’ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ೫ ಸಾವಿರದ ೩೦೦ ಒತ್ತೆಯಾಳುಗಳಲ್ಲಿ ಚೀನಾದ ೧ ಸಾವಿರದ ೬೦೦ ನಾಗರಿಕರು, ಮ್ಯಾನ್ಮಾರ್ನ ೨೦೦, ಥೈಲ್ಯಾಂಡ್ನ ೨೦ ನಾಗರಿಕರು, ಹಾಗೆಯೇ ಫಿಲಿಪೈನ್ಸ್, ತೈವಾನ್, ಮಲೇಷ್ಯಾ, ಬ್ರೆಜಿಲ್, ರಷ್ಯಾ, ಕೀನ್ಯಾ, ಉಗಾಂಡಾ, ರವಾಂಡಾ ಮತ್ತು ಜಿಂಬಾಬ್ವೆ ದೇಶಗಳ ನಾಗರಿಕರು ಸೇರಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗಾಗಿ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳ ಪ್ರಯತ್ನ
ಈ ಯುವಕರ ಬಿಡುಗಡೆಗಾಗಿ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಪ್ರಯತ್ನಗಳನ್ನು ಆರಂಭಿಸಿವೆ. ವಿದೇಶಾಂಗ ಸಚಿವಾಲಯ ಮತ್ತು ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದ್ದು, ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್, ಸಂಸದ ಅಶೋಕ್ ಚವಾಣ್ ಮತ್ತು ಮಾಜಿ ಸಚಿವ ಧನಂಜಯ್ ಮುಂಡೆ ಅವರೂ ಈ ವಿಷಯದಲ್ಲಿ ನೇತೃತ್ವ ವಹಿಸಿದ್ದಾರೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಮ್ಯಾನ್ಮಾರ್ನ ಇಂತಹ ಕೇಂದ್ರಗಳಲ್ಲಿ ೧ ಲಕ್ಷಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ. ಭಾರತವು ಕಳೆದ ಒಂದೂವರೆ-ಎರಡು ವರ್ಷಗಳಲ್ಲಿ ಇಂತಹ ಕೇಂದ್ರಗಳಿಂದ ೨ ಸಾವಿರದ ೪೦೦ ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಿದೆ.
‘ಗೋಲ್ಡನ್ ಟ್ರಯಾಂಗಲ್’ ಎಂದರೆ ಏನು?ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್ ಈ ೩ ದೇಶಗಳ ಗಡಿಗಳು ಸಂಧಿಸುವ ಪ್ರದೇಶವನ್ನು ‘ಗೋಲ್ಡನ್ ಟ್ರಯಾಂಗಲ್’ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ಈ ಹಿಂದೆ ಅಫೀಮು ಮತ್ತು ಇತರ ಮಾದಕ ದ್ರವ್ಯಗಳ ಉತ್ಪಾದನೆ ಹಾಗೂ ಕಳ್ಳಸಾಗಣೆಗೆ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಇಲ್ಲಿ ಮಾನವ ಕಳ್ಳಸಾಗಣೆ, ಆನ್ಲೈನ್ ಆರ್ಥಿಕ ವಂಚನೆ (ಸೈಬರ್ ಸ್ಕ್ಯಾಮ್), ಕಾನೂನುಬಾಹಿರ ಕಾಲ್ ಸೆಂಟರ್ಗಳು ಮತ್ತು ಸಶಸ್ತ್ರ ಅಪರಾಧಿ ಗ್ಯಾಂಗ್ಗಳ ಜಾಲವು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ವಿದೇಶಿ ಯುವಕರಿಗೆ ಕೆಲಸದ ಆಮಿಷ ಒಡ್ಡಿ ಇಲ್ಲಿಗೆ ಕರೆತರಲಾಗುತ್ತದೆ ಮತ್ತು ಸೈಬರ್ ವಂಚನೆಗಾಗಿ ಬಲವಂತವಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ. ಇದನ್ನು ವಿರೋಧಿಸುವವರಿಗೆ ಹಲ್ಲೆ, ವಿದ್ಯುತ್ ಶಾಕ್ ಮತ್ತು ಗನ್ ತೋರಿಸಿ ಬೆದರಿಕೆ ಹಾಕಲಾಗುತ್ತಿದೆ ಎಂಬ ವಿಷಯ ಮುನ್ನಲೆಗೆ ಬಂದಿದೆ. |
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ