ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ

ಕಟ್ಟಾ ಹಿಂದುತ್ವ ಪ್ರತಿಪಾದಕ ಪುನೀತ್ ಕೆರೆಹಳ್ಳಿ

ರಾಯಚೂರು – ರಾಯಚೂರು ಜಿಲ್ಲೆಯ ಹತ್ತಿರವಿರುವ ಆಂಧ್ರಪ್ರದೇಶದ ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ಪ್ರಖರ ಹಿಂದುತ್ವವಾದಿ ಶ್ರೀ. ಪುನೀತ್ ಕೆರೆಹಳ್ಳಿ ದರ್ಶನಕ್ಕಾಗಿ ಬಂದಿದ್ದರು. ಇದರ ನಂತರ ಅವರು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ನಗರದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಮಹೋತ್ಸವ’ವನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದರು. ಈ ಸಮಯದಲ್ಲಿ ಕರ್ನಾಟಕ ಪೊಲೀಸರು ಅವರನ್ನು ಮಂತ್ರಾಲಯದಲ್ಲೇ ತಡೆದರು ಮತ್ತು ಅವರ ಮೇಲೆ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ ಇರುವುದಾಗಿ ತಿಳಿಸಿದರು. ಇದಕ್ಕೆ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಮಂತ್ರಾಲಯಕ್ಕೆ ಬಂದಿದ್ದೇನೆ. ನನ್ನ ಯಾವುದೇ ರಾಜಕೀಯ ಉದ್ದೇಶವಿಲ್ಲ. ಹಾಗಿರುವಾಗ ನೀವು ನನ್ನನ್ನು ಏಕೆ ತಡೆಯುತ್ತಿದ್ದೀರಿ? ನಿಮ್ಮ ಕ್ರಮದ ಹಿಂದೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡವೇ ಇದೆ. ಇದು ಸರಿಯಲ್ಲ ಎಂದು ಕೆರೆಹಳ್ಳಿ ಹೇಳಿದರು.