ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!

ಜಗದ್ಗುರುಗಳ ಮಾರ್ಗದರ್ಶನದಲ್ಲಿ ಇದುವರೆಗೆ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಜನರಿಂದ ‘ಘರ್ ವಾಪಸಿ’!

(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನರ್ಪ್ರವೇಶ)

ವ್ಯಾಸಪೀಠದಲ್ಲಿ ಎಡಗಡೆಯಿಂದ ಶ್ರೀ. ಪ್ರಬಲ ಪ್ರತಾಪ ಸಿಂಗ ಜುದೇವ ಮತ್ತು ಮಾರ್ಗದರ್ಶನ ಮಾಡುತ್ತಿರುವ ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರು

ದುರ್ಗ (ಛತ್ತೀಸಗಡ) – ಪರಧರ್ಮದ ಧರ್ಮಪ್ರಚಾರಕರ ಸುಳ್ಳು ಭರವಸೆಗಳು ಮತ್ತು ಆಮಿಷಗಳಿಗೆ ಒಳಗಾಗಿ ಮೂಲ ಸನಾತನ ಹಿಂದೂ ಧರ್ಮದಿಂದ ದೂರ ಹೋಗಿದ್ದ 175 ಜನರು ಜೂನ್ 4 ರಂದು ದುರ್ಗ ಜಿಲ್ಲೆಯ ಪುಲಗಾವನಲ್ಲಿ ಹಿಂದೂ ಧರ್ಮಕ್ಕೆ ಪುನರ್ಪ್ರವೇಶಿಸಿದರು. ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣಾದಾಯಿ ವಿಚಾರಗಳಿಂದ ಪ್ರಭಾವಿತರಾದ ಈ ಸಹೋದರರು, ಶಾಸ್ತ್ರೋಕ್ತ ವಿಧಿವಿಧಾನಗಳು ಮತ್ತು ವೈದಿಕ ಮಂತ್ರೋಚ್ಚಾರಗಳ ಸಾಕ್ಷಿಯೊಂದಿಗೆ ಸ್ವಧರ್ಮವನ್ನು ಸ್ವೀಕರಿಸಿದರು. ವಿವಿಧ ಸಂತ-ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಈ ಸಮಾರಂಭವು ಅತ್ಯಂತ ಉತ್ಸಾಹಭರಿತ ಹಾಗೂ ಧಾರ್ಮಿಕ ವಾತಾವರಣದಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಲೋಕತಂತ್ರ ಸೇನಾನಿ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದ ಉಪಾಸನೆ, ಭಾಜಪದ ಪ್ರದೇಶ ಉಪಾಧ್ಯಕ್ಷರಾದ ಪ್ರಬಲ ಪ್ರತಾಪ ಸಿಂಗ ಜುದೇವ, ಹಾಗೂ ದುರ್ಗ ಜಿಲ್ಲೆಯ ಮಾಜಿ ಶಾಸಕರಾದ ಅರುಣ ವೋರಾ ರವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಲು ಉಪಸ್ಥಿತರಿದ್ದ ಬಾಂಧವರು

ದೇಶಾದ್ಯಂತ ಅವಿರತವಾಗಿ ನಡೆಯುತ್ತಿರುವ ಧರ್ಮಕಾರ್ಯ!

ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರು

ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಯವರ ಮಾರ್ಗದರ್ಶನದಲ್ಲಿ ಇದುವರೆಗೆ ದೇಶಾದ್ಯಂತ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಬಂಧುಗಳು ವಿಧ್ಯುಕ್ತವಾಗಿ ಮತ್ತು ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ. ಈ ಧರ್ಮಕಾರ್ಯವು ದೇಶಾದ್ಯಂತ ಅವಿರತವಾಗಿ ಸಾಗುತ್ತಿದ್ದು, ಸಮಾಜ ಜಾಗೃತಿ, ಧರ್ಮ ಸಂವರ್ಧನೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ. ಪರಧರ್ಮಕ್ಕೆ ಹೋಗಿದ್ದ ಹಿಂದೂ ಸಹೋದರರನ್ನು ಗೌರವಪೂರ್ವಕವಾಗಿ ಮರುಸೇರಿಸಿಕೊಳ್ಳುವ ಈ ಉಪಕ್ರಮದ ಮೂಲಕ ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ಸಮಾಜದ ಮುಂದೆ ಒಂದು ಆದರ್ಶವನ್ನು ಸೃಷ್ಟಿಸಿದ್ದಾರೆ ಎಂಬ ಭಾವನೆಯನ್ನು ಉಪಸ್ಥಿತರು ವ್ಯಕ್ತಪಡಿಸಿದರು.