ಜಗದ್ಗುರುಗಳ ಮಾರ್ಗದರ್ಶನದಲ್ಲಿ ಇದುವರೆಗೆ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಜನರಿಂದ ‘ಘರ್ ವಾಪಸಿ’!
(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನರ್ಪ್ರವೇಶ)

ದುರ್ಗ (ಛತ್ತೀಸಗಡ) – ಪರಧರ್ಮದ ಧರ್ಮಪ್ರಚಾರಕರ ಸುಳ್ಳು ಭರವಸೆಗಳು ಮತ್ತು ಆಮಿಷಗಳಿಗೆ ಒಳಗಾಗಿ ಮೂಲ ಸನಾತನ ಹಿಂದೂ ಧರ್ಮದಿಂದ ದೂರ ಹೋಗಿದ್ದ 175 ಜನರು ಜೂನ್ 4 ರಂದು ದುರ್ಗ ಜಿಲ್ಲೆಯ ಪುಲಗಾವನಲ್ಲಿ ಹಿಂದೂ ಧರ್ಮಕ್ಕೆ ಪುನರ್ಪ್ರವೇಶಿಸಿದರು. ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣಾದಾಯಿ ವಿಚಾರಗಳಿಂದ ಪ್ರಭಾವಿತರಾದ ಈ ಸಹೋದರರು, ಶಾಸ್ತ್ರೋಕ್ತ ವಿಧಿವಿಧಾನಗಳು ಮತ್ತು ವೈದಿಕ ಮಂತ್ರೋಚ್ಚಾರಗಳ ಸಾಕ್ಷಿಯೊಂದಿಗೆ ಸ್ವಧರ್ಮವನ್ನು ಸ್ವೀಕರಿಸಿದರು. ವಿವಿಧ ಸಂತ-ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಈ ಸಮಾರಂಭವು ಅತ್ಯಂತ ಉತ್ಸಾಹಭರಿತ ಹಾಗೂ ಧಾರ್ಮಿಕ ವಾತಾವರಣದಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಲೋಕತಂತ್ರ ಸೇನಾನಿ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದ ಉಪಾಸನೆ, ಭಾಜಪದ ಪ್ರದೇಶ ಉಪಾಧ್ಯಕ್ಷರಾದ ಪ್ರಬಲ ಪ್ರತಾಪ ಸಿಂಗ ಜುದೇವ, ಹಾಗೂ ದುರ್ಗ ಜಿಲ್ಲೆಯ ಮಾಜಿ ಶಾಸಕರಾದ ಅರುಣ ವೋರಾ ರವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

ದೇಶಾದ್ಯಂತ ಅವಿರತವಾಗಿ ನಡೆಯುತ್ತಿರುವ ಧರ್ಮಕಾರ್ಯ!![]() ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಯವರ ಮಾರ್ಗದರ್ಶನದಲ್ಲಿ ಇದುವರೆಗೆ ದೇಶಾದ್ಯಂತ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಬಂಧುಗಳು ವಿಧ್ಯುಕ್ತವಾಗಿ ಮತ್ತು ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ. ಈ ಧರ್ಮಕಾರ್ಯವು ದೇಶಾದ್ಯಂತ ಅವಿರತವಾಗಿ ಸಾಗುತ್ತಿದ್ದು, ಸಮಾಜ ಜಾಗೃತಿ, ಧರ್ಮ ಸಂವರ್ಧನೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ. ಪರಧರ್ಮಕ್ಕೆ ಹೋಗಿದ್ದ ಹಿಂದೂ ಸಹೋದರರನ್ನು ಗೌರವಪೂರ್ವಕವಾಗಿ ಮರುಸೇರಿಸಿಕೊಳ್ಳುವ ಈ ಉಪಕ್ರಮದ ಮೂಲಕ ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ಸಮಾಜದ ಮುಂದೆ ಒಂದು ಆದರ್ಶವನ್ನು ಸೃಷ್ಟಿಸಿದ್ದಾರೆ ಎಂಬ ಭಾವನೆಯನ್ನು ಉಪಸ್ಥಿತರು ವ್ಯಕ್ತಪಡಿಸಿದರು. |

ಜೆಜುರಿ(ಪುಣೆ): ಬೆಲಸರದಲ್ಲಿ ಛತ್ರಪತಿ ಸರದಾರರ ಐತಿಹಾಸಿಕ ಭೂಮಿಯ ಮೇಲೆ ಮತಾಂಧರ ಅತಿಕ್ರಮಣ!
ಶಿರಡಿ: ಶ್ರೀ ಸಾಯಿಬಾಬಾ ಮಂದಿರದಲ್ಲಿ ಫಂಗಸ್ ಪೇಡ ಮಾರಾಟ!
ಮುಂಬಯಿ: ಹಣ ಪಡೆದು ಬಾಂಗ್ಲಾದೇಶಿ ವಲಸಿಗರಿಗೆ ರಕ್ಷಣೆ!
ಸುಲಿಗೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಬ್ಯಸಾಚಿ ದತ್ತಾ ಬಂಧನ
ಮೇ ತಿಂಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ೮೦ ಶೇಕಡಾ ಹೆಚ್ಚಳ!
ಬಂಗಾಳ: ಭಾಜಪ ಮಹಿಳಾ ಕಾರ್ಯಕರ್ತೆಯ ಕೊಲೆ ಪ್ರಕರಣ; ಟಿಎಂಸಿ ನಾಯಕ ಅಬ್ದುಲ್ ಅಲೀಮ್ ಬಂಧನ