ಶವ ಹೂಳಲು ಮುಸಲ್ಮಾನ ಮತ್ತು ಪಾರ್ಸಿ ಎರಡೂ ಸಮಾಜಗಳಿಂದ ನಿರಾಕರಣೆ : ಕೊನೆಗೆ ಹಿಂದೂ ಸ್ಮಶಾನಭೂಮಿಯಲ್ಲಿ ಅಂತ್ಯಸಂಸ್ಕಾರ !
ಮಹಿಳೆಯು ಮತಾಂತರ ಮಾಡಿಕೊಂಡಿರಲಿಲ್ಲ !

ಕರ್ಣಾವತಿ (ಗುಜರಾತ) – ಮುಸಲ್ಮಾನ ವ್ಯಕ್ತಿಯೊಬ್ಬನನ್ನು ನಿಕಾಹ್ ಮಾಡಿಕೊಂಡಿದ್ದ ಗುಜರಾತಿನ ಪಾರ್ಸಿ ಮಹಿಳೆಯೊಬ್ಬರ ಮೃತದೇಹವು 2 ದಿನಗಳ ಕಾಲ ಅಂತ್ಯಸಂಸ್ಕಾರಕ್ಕಾಗಿ ಕಾಯಬೇಕಾದ ಘಟನೆ ಬೆಳಕಿಗೆ ಬಂದಿದೆ. ಮುಸಲ್ಮಾನ ಮತ್ತು ಪಾರ್ಸಿ ಎರಡೂ ಸಮಾಜಗಳು ದಫನಭೂಮಿಯನ್ನು ನೀಡಲು ನಿರಾಕರಿಸಿದ್ದರಿಂದ ಆಕೆಯ ಮೃತದೇಹವು ಶವಗಾರದಲ್ಲಿಯೇ ಬಿದ್ದಿತ್ತು. ಮುಸಲ್ಮಾನ ಪತಿಯು ಕೆಲವು ಮೌಲ್ವಿಗಳ (ಇಸ್ಲಾಂನ ಧಾರ್ಮಿಕ ಮುಖಂಡರು) ಸಂಪರ್ಕದಲ್ಲಿದ್ದರೂ, ನಿಕಾಹ್ (ಇಸ್ಲಾಮಿಕ್ ಪದ್ಧತಿಯ ಮದುವೆ) ಆಗಿದ್ದರೂ ಸಹ ಇಸ್ಲಾಮಿಕ್ ಪದ್ಧತಿಯಂತೆ ಆಕೆಯ ಮೃತದೇಹದ ಹೂಳಲು ಅನುಮತಿ ಸಿಗಲಿಲ್ಲ. ಇದರ ನಂತರ ಪತಿಯು ಪಾರ್ಸಿ ಸಮುದಾಯವನ್ನು ಸಂಪರ್ಕಿಸಿದರೂ, ಅಂತ್ಯಸಂಸ್ಕಾರಕ್ಕೆ ಅನುಮತಿ ದೊರೆಯಲಿಲ್ಲ. ಕೊನೆಗೆ ಸನಾತನ ರೀತಿನೀತಿಗಳ ಪ್ರಕಾರ ಆ ಮಹಿಳೆಯ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಈ ಘಟನೆಯು ಗುಜರಾತಿನ ನವಸಾರಿಯಲ್ಲಿ ನಡೆದಿದೆ.
1. ಈ ಕುರಿತಾದ ವರದಿಯೊಂದರ ಪ್ರಕಾರ, 35 ವರ್ಷಗಳ ಹಿಂದೆ ನವಸಾರಿಯ ಪಾರ್ಸಿ ವಿದ್ಯಾರ್ಥಿನಿಯೊಬ್ಬಳು ಮುಸಲ್ಮಾನ ಪ್ರಾಧ್ಯಾಪಕ ನಿಸಾರ್ ಅಹ್ಮದ್ ಅವರನ್ನು ನಿಕಾಹ್ ಮಾಡಿಕೊಂಡಿದ್ದಳು.
2. ಪಾರ್ಸಿ ಸಮಾಜವು ಆ ವಿದ್ಯಾರ್ಥಿನಿಯನ್ನು ಪಾರ್ಸಿ ಸಮುದಾಯದಿಂದ ಹೊರಹಾಕಿತ್ತು ಮತ್ತು ಕುಟುಂಬಸ್ಥರೂ ಸಹ ಆಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು.
3. ಮೃತ ಮಹಿಳೆಯು ಇಸ್ಲಾಂ ಧರ್ಮವನ್ನು ಸ್ವೀಕರಿಸಿರಲಿಲ್ಲ ಮತ್ತು ಅವಳು ಜೊರಾಸ್ಟ್ರಿಯನ್ (ಪಾರ್ಸಿ) ಧರ್ಮವನ್ನೇ ಪಾಲಿಸುತ್ತಿದ್ದಳು. ಈ ದಂಪತಿಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ಅವಳು ಅನಾರೋಗ್ಯಕ್ಕೆ ತುತ್ತಾಗಿ, ಜೂನ್ 4 ರಂದು ನಿಧನರಾಗಿದ್ದರು.
4. ಮೃತ ಮಹಿಳೆಯ ಸಹೋದರಿಯು ಮಾಹಿತಿ ನೀಡಿ, ಯಾವುದೇ ದಾರಿ ಉಳಿಯದ ಕಾರಣ ತಾವು ನವಸಾರಿಯ ಸಮಾಜ ಸೇವಕ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಸಾಜನ ಭರವಾಡ ಅವರ ಸಹಾಯವನ್ನು ಕೋರಿದ್ದಾಗಿ ತಿಳಿಸಿದರು. ಎಲ್ಲರ ಒಪ್ಪಿಗೆಯೊಂದಿಗೆ ಹಿಂದೂ ಸ್ಮಶಾನಭೂಮಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ತೃಣಮೂಲ ಕಾಂಗ್ರೆಸ್ನ 20 ಸಂಸದರ ಬಂಡಾಯ !