ಭಾರತ-ನೇಪಾಳ ಗಡಿಯ ಬಳಿ ಸಿಕ್ಕಿಬಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ : Jahangir Khan Arrest

ಪೊಲೀಸರಿಗೆ ಸವಾಲು ಮತ್ತು ಸುಲಿಗೆ ಆರೋಪದಡಿ ಬಂಧನ

ಕೊಲಕಾತಾ – ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ ಖಾನ್ ಅವರನ್ನು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ ಬಂಧಿಸಿದೆ. ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರದ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಹಾಂಗೀರ್ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದರು. ಈ ಹಿಂದೆ ಮತದಾನದ ಅವಧಿಯಲ್ಲಿ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುವ ಮೂಲಕ ಅವರು ಸುದ್ದಿಯಾಗಿದ್ದರು. ಸುಲಿಗೆಯ ಆರೋಪದ ಮೇಲೆ ಉತ್ತರ ಬಂಗಾಳದ ಭಾರತ-ನೇಪಾಳ ಗಡಿಯ ಬಳಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1. ಕೊಲಕಾತಾ ಉಚ್ಚ ನ್ಯಾಯಾಲಯವು ಜಹಾಂಗೀರ್ ಖಾನ್ ಅವರಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಮೇ 26 ರಂದು ರದ್ದುಗೊಳಿಸಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ 7 ಎಫ್.ಐ.ಆರ್. ದಾಖಲಾಗಿದ್ದವು.

2. ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಜಹಾಂಗೀರ್ ಖಾನ್ ಅವರನ್ನು ಉತ್ತರ ಬಂಗಾಳದ ಭಾರತ-ನೇಪಾಳ ಗಡಿಯ ಬಳಿಯಿಂದ ಬಂಧಿಸಲಾಗಿದೆ; ಆದರೆ ಪೊಲೀಸರು ಈ ಬಂಧನದ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ತಿಳಿಸಿದರು.

ಯಾವ ಪ್ರಕರಣ?

ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹಿಂಸಾಚಾರ ಮತ್ತು ನಿಯಮಗಳ ಉಲ್ಲಂಘನೆಯ ಆರೋಪಗಳ ಹಿನ್ನೆಲೆಯಲ್ಲಿ ಫಾಲ್ಟಾದಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣೆಯ ಸಮಯದಲ್ಲಿ ಜಹಾಂಗೀರ್ ಖಾನ್ ಅವರು ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಗೆ ‘ಪುಷ್ಪ’ ಚಿತ್ರದ ‘ಪುಷ್ಪ ಝುಕೇಗಾ ನಹೀ’ (ಪುಷ್ಪ ಬಗ್ಗುವುದಿಲ್ಲ) ಎಂಬ ಸಂಭಾಷಣೆಯನ್ನು ಹೇಳುವ ಮೂಲಕ ಸವಾಲು ಹಾಕಿದ್ದರು. ಇದು ಉದ್ವಿಗ್ನತೆಗೆ ಕಾರಣವಾಗಿತ್ತು.

ಸಂಪಾದಕೀಯ ನಿಲುವು

ಗೂಂಡಾ ಪ್ರವೃತ್ತಿಯ ನಾಯಕರಿಂದ ತುಂಬಿರುವ ತೃಣಮೂಲ ಕಾಂಗ್ರೆಸ್ ಅನ್ನು ನಿಷೇಧಿಸುವುದು ಆವಶ್ಯಕವಾಗಿದೆ