ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!

ಠಾಣೆ – ಅಂಬರನಾಥದಲ್ಲಿನ ಚಿಂಚಪಾಡಾ ಭಾಗದ ಕಲ್ಲುಗಣಿ ಪ್ರದೇಶದಲ್ಲಿನ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆಯಾಗಿವೆ. ಛಿದ್ರಛಿದ್ರಗೊಂಡ ಸ್ಥಿತಿಯಲ್ಲಿದ್ದ ಈ ಅವಶೇಷಗಳನ್ನು ಕಂಡು ಸ್ಥಳೀಯ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಿಚಿತರು ಗೋವಂಶವನ್ನು ಹತ್ಯೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅವುಗಳನ್ನು ಇಲ್ಲಿ ತಂದು ಹಾಕಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ. (ಇಂತಹ ಆಗ್ರಹವನ್ನು ಏಕೆ ಮಾಡಬೇಕಾಗುತ್ತದೆ? ಪೊಲೀಸರು ಸ್ವಯಂಪ್ರೇರಿತರಾಗಿ ಯಾವಾಗ ಕ್ರಮ ಕೈಗೊಳ್ಳುತ್ತಾರೆ? – ಸಂಪಾದಕರು)

ಕೆಲವು ತಿಂಗಳುಗಳ ಹಿಂದೆ ಅಂಬರನಾಥ ದಲ್ಲಿ ಗೋಮಾಂಸ ಮಾರಾಟ ಮತ್ತು ಅಕ್ರಮ ಪಶು ವಧಾಗೃಹಗಳ ವಿರುದ್ಧ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ ಹಲವು ಕಡೆಗಳಲ್ಲಿ ಕ್ರಮ ಕೈಗೊಂಡಿದ್ದರು. ಆ ನಂತರವೂ ನಗರದಲ್ಲಿ ಗುಪ್ತ ರೀತಿಯಲ್ಲಿ ಗೋಹತ್ಯೆಗಳು ಮುಂದುವರಿದಿವೆ. (ಹೀಗೆ ನಡೆಯುತ್ತಿದೆ ಎಂದರೆ ಗೋಹತ್ಯೆ ಮಾಡುವವರ ಮೇಲೆ ಪೊಲೀಸರ ಯಾವುದೇ ಭಯವಿಲ್ಲ ಎಂದರ್ಥ. ಪೊಲೀಸರ ಕಾರ್ಯಾಚರಣೆ ನಿಲ್ಲುತ್ತಿದ್ದಂತೆಯೇ ಅವರು ಮತ್ತೆ ಸಕ್ರಿಯರಾಗುತ್ತಾರೆ ಎಂಬುದು ಇದರಿಂದ ಸಾಬೀತಾಗುತ್ತದೆ. – ಸಂಪಾದಕರು)

ಸಂಪಾದಕೀಯ ನಿಲುವು

ಗೋ ಹತ್ಯೆ ನಿಷೇಧ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣವೇ ಪ್ರತಿದಿನ ಇಂತಹ ಘಟನೆಗಳು ಜರುಗುತ್ತಿವೆ! ಈ ಪರಿಸ್ಥಿತಿಯನ್ನು ಬದಲಾಯಿಸಲು ಗೋಪ್ರೇಮಿಗಳ ಹಿಂದೂ ರಾಷ್ಟ್ರವೇ ಬೇಕು!