ಧಾರಾವಿಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ : ಪ್ರಕರಣ ದಾಖಲು!

ಮುಂಬಯಿ – ಪೊಲೀಸ್ ವಾಹನದ ಮೇಲೆ ಆರೋಪಿ ಕಲ್ಲು ತೂರಾಟ ನಡೆಸಿದ್ದರಿಂದ ವಾಹನದ ಗಾಜು ಒಡೆದಿದೆ. ಧಾರಾವಿ ಪ್ರದೇಶದಲ್ಲಿ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಕರಣ್ ಜಾಧವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಶೇವಿಂಗ್ ಬ್ಲೇಡ್ ನೀಡುವ ವಿಚಾರವಾಗಿ ಜಾಧವ್ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ದೂರು ನೀಡಿದವರನ್ನು ಪೊಲೀಸ್ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆತರಲಾಗುತ್ತಿತ್ತು. ಆ ಸಮಯದಲ್ಲಿ ಜಾಧವ್ ಈ ಕೃತ್ಯ ಎಸಗಿದ್ದಾನೆ.

ಸಂಪಾದಕೀಯ ನಿಲುವು

ಹೀಗೆ ಮಾಡುವ ಧೈರ್ಯ ಬರುತ್ತದೆ ಎಂದರೆ ಆರೋಪಿಗಳಿಗೆ ಪೊಲೀಸರ ಭಯವೇ ಉಳಿದಿಲ್ಲ ಎಂದರ್ಥ. ಪೊಲೀಸ್ ಆಡಳಿತವು ತನ್ನ ಪ್ರಭಾವವನ್ನು ಯಾವಾಗ ನಿರ್ಮಿಸಿಕೊಳ್ಳುತ್ತದೆ?