ಮಹಿಳೆಯರ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆನ್ಲೈನ್ ಮೂಲಕ ಧಾರ್ಮಿಕ ಪ್ರವಚನ ನೀಡುತ್ತಿದ್ದ ಪಾದ್ರಿಯ ಬಂಧನ

ಕರ್ಣಾವತಿ (ಗುಜರಾತ್) – ಆನ್ಲೈನ್ ಮೂಲಕ ಧಾರ್ಮಿಕ ಪ್ರವಚನ ನೀಡುವ ದೆಹಲಿಯ 27 ವರ್ಷದ ಪಾದ್ರಿಯೊಬ್ಬನನ್ನು ಕರ್ಣಾವತಿ ಪೊಲೀಸರು ಬಂಧಿಸಿದ್ದಾರೆ. ಸುಮಿತ ನೇಮಚಂದ್ ಶರ್ಮಾ ಎಂಬುದು ಆತನ ಹೆಸರು. ಆತ ಓರ್ವ ಮಹಿಳೆಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ್ದ; ಆದರೆ ಮಹಿಳೆ ನಿರಾಕರಿಸಿದ್ದಳು. ಈ ವಿಷಯದ ಬಗ್ಗೆ ಕೋಪಗೊಂಡ ಪಾದ್ರಿಯು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಹಿಳೆ ಮತ್ತು ಆಕೆಯ ತಾಯಿಯ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದಾಗ, ಈ ಪಾದ್ರಿಯು ತನ್ನ ನಕಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 100 ಕ್ಕೂ ಹೆಚ್ಚು ಮಹಿಳೆಯರ ಇಂತಹ ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಿದ್ದನೆಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಇಂತಹ ಕಾಮುಕ ಪಾದ್ರಿಗಳ ವಿರುದ್ಧ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಎಂದಿಗೂ ಏಕೆ ಮಾತನಾಡುವುದಿಲ್ಲ?