ಉಗುಳಿದ ರೊಟ್ಟಿಯನ್ನು ಗಿರಾಕಿಗಳಿಗೆ ನೀಡುತ್ತಿದ್ದ ಪ್ರಕರಣ
ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಮತ್ತು ಅಡುಗೆ ಮಾಡುವ ಕೌಶಾರ್ ಅವರಿಗೆ ನೋಟಿಸ್ ನೀಡಿ ಬಿಡುಗಡೆ !

ಮುಂಬಯಿ – ಗೋರೆಗಾಂವ್ನ ಸಂತೋಷನಗರ ಪ್ರದೇಶದ ‘ಫಿಶ್ ಕೋಳಿವಾಡ’ ಉಪಹಾರಗೃಹದಲ್ಲಿ ತಯಾರಿಸಲಾಗುವ ಪ್ರತಿ ರೊಟ್ಟಿಯ ಮೇಲೆ ಉಗುಳಿ ಅದನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಅಹ್ಮದ್ ಶೇಖ್ ಮತ್ತು ಅಡುಗೆ ಮಾಡುವ ಕೌಶಾರ್ ಗಫಾರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ; ಆದರೆ ವಿಚಾರಣೆಯ ನಂತರ ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಿದ್ದಾರೆ.
ಇಲ್ಲಿನ ದೀಪಕ ಪವಾರ್ ಅವರು ಈ ಉಪಹಾರಗೃಹದ ಹತ್ತಿರದಿಂದ ಹೋಗುತ್ತಿದ್ದಾಗ, ಅವರಿಗೆ ಕೌಶಾರ್ ಶೇಖ್ ರೊಟ್ಟಿಯ ಮೇಲೆ ಉಗುಳುತ್ತಿರುವುದು ಕಂಡುಬಂದಿದೆ. ಸಂಶಯ ಬಂದಿದ್ದರಿಂದ ಅವರು ಸ್ವಲ್ಪ ಸಮಯ ನಿಂತು ಗಮನಿಸಿದಾಗ, ಅವನು ಪ್ರತಿ ರೊಟ್ಟಿಯ ಮೇಲೂ ಉಗುಳಿ ಅದನ್ನು ಒಲೆಗೆ ಹಾಕುತ್ತಿರುವುದು ಅವರ ಗಮನಕ್ಕೆ ಬಂದಿತು. ಆ ನಂತರ ಅದೇ ರೊಟ್ಟಿಯನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಅವರು ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಇದನ್ನು ದಾಖಲಿಸಿಕೊಂಡಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ