ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಯ್‌ ಬರೇಲಿ ನ್ಯಾಯಾಲಯದಲ್ಲಿ ಮೊಕದ್ದಮೆ !

ಪ್ರಧಾನಮಂತ್ರಿ ಮೋದಿ ಮತ್ತು ಗೃಹಮಂತ್ರಿ ಶಾ ಅವರನ್ನು ‘ದ್ರೋಹಿ’ ಎಂದು ಕರೆದ ಪ್ರಕರಣ;

ರಾಯ್‌ ಬರೇಲಿ (ಉತ್ತರಪ್ರದೇಶ) – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾ ಅವರ ಕುರಿತು ಆಕ್ಷೇಪಾರ್ಹ ಟಿಪ್ಪಣಿ ಮಾಡಿದ ಪ್ರಕರಣದಲ್ಲಿ ರಾಯ್‌ ಬರೇಲಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಮೇ ೧೯ ಮತ್ತು ೨೦ ರಂದು ರಾಯ್‌ ಬರೇಲಿ ಪ್ರವಾಸದ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ‘ಗದ್ದಾರ್’(ದ್ರೋಹಿ) ಎಂದು ಕರೆದಿದ್ದರು. ಶಕೀಲ್ ಅಹ್ಮದ್ ಎಂಬವರು ಈ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಜೂನ್ ೧೫ ರಂದು ನಡೆಯಲಿದೆ.

ಸಂಪಾದಕೀಯ ನಿಲುವು

ದೇಶದ ಪ್ರಧಾನಮಂತ್ರಿ ಎಂಬುದು ಸಂವಿಧಾನ ನಿಶ್ಚಿತಗೊಳಿಸಿರುವ ಒಂದು ಸರ್ವೋಚ್ಚ ಹುದ್ದೆಯಾಗಿದೆ. ಈ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಸಾರ್ವಜನಿಕ ವೇದಿಕೆಯಿಂದ ಅಪಮಾನಿಸುವುದೆಂದರೆ ಸಂಪೂರ್ಣ ಭಾರತೀಯರನ್ನು ಅವಮಾನಿಸಿದಂತೆ !