ಕೊಯಂಬತ್ತೂರು (ತಮಿಳುನಾಡು): ೧೦ ವರ್ಷದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ; ಹತ್ಯೆ !

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಮಹಿಳಾ ಪೊಲೀಸ್ ಮಹಾನಿರೀಕ್ಷಕರು ನಗುತ್ತಿದ್ದರಿಂದ ಆಕ್ರೋಶ

ಕೊಯಂಬತ್ತೂರು (ತಮಿಳುನಾಡು) – ಇಲ್ಲಿನ ಸೂಲೂರು ಪರಿಸರದಲ್ಲಿ ಓರ್ವ ೧೦ ವರ್ಷದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರಗೈದು ಆಕೆಯ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯ ಹತ್ತಿರ ಕಿರಾಣಿ ಸಾಮಾನು ತರಲು ಹೋಗಿದ್ದ ಬಾಲಕಿಯು ಊರ ಹೊರಗಿನ ಕೆರೆಯ ಬಳಿ ಮೃತಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆಯ ಕುರಿತು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಪ್ರತಿಕ್ರಿಯೆ ನೀಡುತ್ತಾ, ಇದು ದುಃಖದ ಘಟನೆಯಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಕೊಯಂಬತ್ತೂರು ಪಶ್ಚಿಮ ವಿಭಾಗದ ಪೊಲೀಸ್ ಮಹಾನಿರೀಕ್ಷಕರಾದ ಆರ್.ವಿ. ರಮ್ಯಾ ಭಾರತಿಯವರು ಮಾಹಿತಿ ನೀಡಿದರು. ಇಂತಹ ಗಂಭೀರ ಘಟನೆಯ ಕುರಿತು ಪತ್ರಿಕಾಗೋಷ್ಠಿ ನಡೆಸುವಾಗ ಈ ಮಹಿಳಾ ಪೊಲೀಸ್ ಅಧಿಕಾರಿಯು ಯಾವುದೋ ಆನಂದೋತ್ಸವದ ಕಾರ್ಯಕ್ರಮಕ್ಕೆ ಬಂದಂತೆ ನಗುತ್ತಾ ಸಮಯ ಕಳೆದರು. ರಮ್ಯಾ ಭಾರತಿಯವರ ಈ ವರ್ತನೆ ಚಿತ್ರೀಕರಣಗೊಂಡು ಪ್ರಸಾರವಾದ ನಂತರ ಇಂತಹ ಅಸಮರ್ಥ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿ, ಎಂದು ಅಸಮಾಧಾನಗೊಂಡ ಜನರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಬಾಲಕಿಯ ಮೇಲಿನ ಲೈಂಗಿಕ ಅತ್ಯಾಚಾರದ ಕುರಿತು ಸಂವೇದನಾರಹಿತವಾಗಿರುವ ಪೊಲೀಸ್ ಮಹಾನಿರೀಕ್ಷಕ ಮಹಿಳಾ ಅಧಿಕಾರಿಯು ಇತರ ಅಪರಾಧಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ವಿಚಾರ ಮಾಡದಿರುವುದೇ ಒಳಿತು ! ಇಂತಹ ಅಧಿಕಾರಿಗಳಿಂದಾಗಿಯೇ ಅಪರಾಧಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು !