ಹಿಂದಿನ ಅನುಭವಗಳಿಂದ ಮತ್ತು ತಪ್ಪುಗಳಿಂದ ಇನ್ನೂ ಯಾವುದೇ ಪಾಠ ಕಲಿತಿಲ್ಲದಿರುವುದು, ಇದು ಅತ್ಯಂತ ದುರ್ದೈವ ! : NEET-UG 2026 Paper Leak

ಸರ್ವೋಚ್ಚ ನ್ಯಾಯಾಲಯವು ‘ನೀಟ್-ಯುಜಿ’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿತು !

ನವಿ ದೆಹಲಿ – ಸರ್ವೋಚ್ಚ ನ್ಯಾಯಾಲಯವು ‘ನೀಟ್-ಯುಜಿ’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವನ್ನು ‘ಹಿಂದಿನ ಅನುಭವಗಳಿಂದ ಮತ್ತು ತಪ್ಪುಗಳಿಂದ ಇನ್ನೂ ಯಾವುದೇ ಪಾಠ ಕಲಿತಿಲ್ಲದಿರುವುದು, ಇದು ಅತ್ಯಂತ ದುರ್ದೈವವಾಗಿದೆ’, ಎಂಬ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.

ಈ ಗಂಭೀರ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ‘ನ್ಯಾಯಾಲಯದ ಹಿಂದಿನ ಆದೇಶದಂತೆ ಸ್ಥಾಪಿಸಲಾದ ಉಸ್ತುವಾರಿ ಸಮಿತಿಯ ಮುಂದೇನಾಯಿತು ?’ ಎಂಬುದರ ಕುರಿತು ಪ್ರಾಧಿಕಾರದ ಬಳಿ ಉತ್ತರ ಕೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಈಗ ಮೇ ೨೯ ರಂದು ನಡೆಯಲಿದೆ.

ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ ವಿಸ್ತೃತ ಅಫಿಡವಿಟ್ ಸಲ್ಲಿಸುವಂತೆ ಆದೇಶ ನೀಡಿದೆ. ಹಾಗೆಯೇ ಹಿಂದಿನ ಉಸ್ತುವಾರಿ ಸಮಿತಿಯ ಅಧ್ಯಕ್ಷರಿಗೆ ಈ ನಿಯಮಗಳ ಪಾಲನೆಯನ್ನು ಖಚಿತಪಡಿಸಲು ನಿರ್ದೇಶನ ನೀಡಿದೆ.