ಹಿಂದೂ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ದಾಳಿ : ೫ ಮುಸಲ್ಮಾನ ಮಹಿಳೆಯರ ಮೇಲೆ ಮೊಕದ್ದಮೆ ದಾಖಲು !

  • ಟಿಟವಾಳಾ (ಠಾಣೆ ಜಿಲ್ಲೆ) ಇಲ್ಲಿ ಅಕ್ರಮ ಚಾಳ(ಸಾಲು ಮನೆ)ಕೆಡವುವ ಪ್ರಕರಣ

  • ಮಹಿಳಾ ಪೊಲೀಸರಿಗೆ ಉಗುರುಗಳಿಂದ ಪರಚಿದರು

  • ಇತರ ಪೊಲೀಸರಿಗೆ ಬೈಗುಳ

ಟಿಟವಾಳಾ (ಠಾಣೆ ಜಿಲ್ಲೆ) – ಇಲ್ಲಿನ ಬಲ್ಯಾಣಿ ಖಜುರಿನಗರ ಭಾಗದಲ್ಲಿ ಅಕ್ರಮ ಚಾಳ(ಸಾಲು ಮನೆ) ಕೆಡವುವಾಗ ಜೆಸಿಬಿ ಯಂತ್ರದ ಮುಂದೆ ಅಡಚಣೆ ತರುತ್ತಿದ್ದ ಮಹಿಳೆಯರನ್ನು ತಿಳುವಳಿಕೆ ಹೇಳಿ ಬದಿಗೆ ಸರಿಸುತ್ತಿದ್ದ ಸಹಾಯಕ ಪೊಲೀಸ್ ನಿರೀಕ್ಷಕ ಸರಲಾ ಕಾಳೆಯವರ ಕೂದಲು ಹಿಡಿದು ಕೆಳಗೆ ಕೆಡವಿದರು. ಅವರಿಗೆ ಮುಷ್ಟಿಯಿಂದ ಗುದ್ದಿ ಹೊಡೆಯುತ್ತಾ ಅವರ ಕೈ-ಕಾಲುಗಳಿಗೆ ಕಚ್ಚಿದರು, ಹಾಗೆಯೇ ಉಗುರುಗಳಿಂದ ಪರಚಿದರು. ಇತರ ಮಹಿಳಾ ಪೊಲೀಸರಿಗೆ ಮತ್ತು ಒತ್ತುವರಿ ನಿಯಂತ್ರಣ ದಳಕ್ಕೆ ಈ ಮಹಿಳೆಯರು ಬೈದರು. ಈ ಪ್ರಕರಣದಲ್ಲಿ ಮಹಾನಗರಪಾಲಿಕೆ ಅಧಿಕಾರಿಯು ದೂರು ಸಲ್ಲಿಸಿದ ನಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡರು. ರೂಬೀನಾ ಖಾನ್ (ವಯಸ್ಸು ೪೨ ವರ್ಷ), ಅವರ ೨ ಹೆಣ್ಣುಮಕ್ಕಳಾದ ಸಾಫಿಯಾ ಖಾನ್ (ವಯಸ್ಸು ೨೩ ವರ್ಷ), ಶಾಹಿನಾ ಖಾನ್ (ವಯಸ್ಸು ೨೧ ವರ್ಷ), ಹಾಗೂ ಸರಫುನ ಶೇಖ್ ಮತ್ತು ಶಾಹಿನ ಖಾನ್ ಎಂದು ಮೊಕದ್ದಮೆ ದಾಖಲಾದ ಮಹಿಳೆಯರ ಹೆಸರುಗಳಾಗಿವೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಮುಸಲ್ಮಾನರಿಂದ ಹಿಂದೂಗಳು ಮಾತ್ರವಲ್ಲ, ಪೊಲೀಸರೂ ಅಸುರಕ್ಷಿತರಾಗಿದ್ದಾರೆ, ಎಂಬುದು ಇಂತಹ ದಾಳಿದ ಘಟನೆಗಳಿಂದ ಗಮನಕ್ಕೆ ಬರುತ್ತದೆ. ಭಾಜಪ ಆಡಳಿತವಿರುವ ರಾಜ್ಯದಲ್ಲಿ ಪೊಲೀಸರ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ, ಸಾಮಾನ್ಯ ಹಿಂದೂಗಳ ರಕ್ಷಣೆ ಮಾಡುವವರು ಯಾರು ?
  • ಪೊಲೀಸರ ಮೇಲೆ ಕೈ ಎತ್ತುವವರಿಗೆ ಜೀವಾವಧಿ ಶಿಕ್ಷೆಯನ್ನೇ ನೀಡಬೇಕು ! ಪೊಲೀಸರ ಮೇಲೆ ಯಾರೂ ಕೈ ಎತ್ತಬಾರದು, ಅಂತಹ ಪ್ರಭಾವವನ್ನು ಪೊಲೀಸರು ನಿರ್ಮಾಣ ಮಾಡಬೇಕು !