ಛತ್ತೀಸಗಢ: 200 ಬಡ ಆದಿವಾಸಿಗಳ ‘ಘರ್ ವಾಪಸಿ’!

  • ಹಿಂದೂ ಧಾರ್ಮ ಸ್ವೀಕರಿಸಿದ ಚರ್ಚ್‌ ಪಾದ್ರಿ!

  • ಜನರ ಕಾಲು ತೊಳೆದು ಹಿಂದೂ ಧರ್ಮಕ್ಕೆ ಸ್ವಾಗತ ಮಾಡಿದ ಭಾಜಪ ಶಾಸಕಿ ಭಾವನಾ ಬೋಹರಾ

(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಸೇರ್ಪಡೆ)

ರಾಯಪುರ (ಛತ್ತೀಸಗಢ) – ರಾಜ್ಯದ ಕವರ್ಧಾ ಜಿಲ್ಲೆಯ ಪಂಡರಿಯಾ ಭಾಗದಲ್ಲಿ ಸುಮಾರು 200 ಬಡ ಆದಿವಾಸಿಗಳು ಘರ್ ವಾಪಸಿ ಮಾಡಿದ್ದಾರೆ. ವಿಶೇಷವೆಂದರೆ, ಹಿಂದೂ ಧರ್ಮ ಸ್ವೀಕರಿಸಿದವರಲ್ಲಿ ಚರ್ಚ್‌ನ ಓರ್ವ ಪಾದ್ರಿ ಕೂಡ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಡರಿಯಾದ ಭಾಜಪ ಶಾಸಕಿ ಭಾವನಾ ಬೋಹರಾ ಉಪಸ್ಥಿತರಿದ್ದರು. ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಈ ಸಮಾರಂಭದಲ್ಲಿ ಆದಿವಾಸಿಗಳನ್ನು ಸನಾತನ ಧರ್ಮಕ್ಕೆ ಸ್ವಾಗತಿಸಿದರು. ಜನರ ಕಾಲುಗಳನ್ನು ತೊಳೆದು ಅವರಿಗೆ ಗೌರವ ಸಲ್ಲಿಸಿದರು.

ಶಾಸಕಿ ಬೋಹರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪಂಡರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಜನರ ಸಹಾಯದಿಂದ ದೀರ್ಘಕಾಲದಿಂದ ಘರ್ ವಾಪಸಿ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಈ ಅಭಿಯಾನವನ್ನು ಆರಂಭಿಸಲಾಯಿತು. ಇದುವರೆಗೆ ಈ ಭಾಗದ ವಿವಿಧ ಗ್ರಾಮಗಳ ಸುಮಾರು 750 ಜನರು ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ವಿವಿಧ ಗ್ರಾಮಗಳಿಂದ ಘರ್ ವಾಪಸಿ ಆದವರ ಸಂಖ್ಯೆ!

1. ನೇವುರ್ ಅರಣ್ಯ ಪ್ರದೇಶದ ಹತ್ತಿರದ ಗ್ರಾಮಗಳಿಂದ 115 ಜನರು
2. ಕುಯಿ-ಕುಕದುರ್ ಭಾಗದಿಂದ 70 ಜನರು
3. ದಮಗಡ ಗ್ರಾಮದಿಂದ 50 ಜನರು
4. ಕುಲ್ಹಿಡೋಂಗರಿ ಗ್ರಾಮದಿಂದ 140 ಜನರು.