ಹಿಂದೂ ಧಾರ್ಮ ಸ್ವೀಕರಿಸಿದ ಚರ್ಚ್ ಪಾದ್ರಿ!
ಜನರ ಕಾಲು ತೊಳೆದು ಹಿಂದೂ ಧರ್ಮಕ್ಕೆ ಸ್ವಾಗತ ಮಾಡಿದ ಭಾಜಪ ಶಾಸಕಿ ಭಾವನಾ ಬೋಹರಾ
(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಸೇರ್ಪಡೆ)

ರಾಯಪುರ (ಛತ್ತೀಸಗಢ) – ರಾಜ್ಯದ ಕವರ್ಧಾ ಜಿಲ್ಲೆಯ ಪಂಡರಿಯಾ ಭಾಗದಲ್ಲಿ ಸುಮಾರು 200 ಬಡ ಆದಿವಾಸಿಗಳು ಘರ್ ವಾಪಸಿ ಮಾಡಿದ್ದಾರೆ. ವಿಶೇಷವೆಂದರೆ, ಹಿಂದೂ ಧರ್ಮ ಸ್ವೀಕರಿಸಿದವರಲ್ಲಿ ಚರ್ಚ್ನ ಓರ್ವ ಪಾದ್ರಿ ಕೂಡ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಡರಿಯಾದ ಭಾಜಪ ಶಾಸಕಿ ಭಾವನಾ ಬೋಹರಾ ಉಪಸ್ಥಿತರಿದ್ದರು. ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಈ ಸಮಾರಂಭದಲ್ಲಿ ಆದಿವಾಸಿಗಳನ್ನು ಸನಾತನ ಧರ್ಮಕ್ಕೆ ಸ್ವಾಗತಿಸಿದರು. ಜನರ ಕಾಲುಗಳನ್ನು ತೊಳೆದು ಅವರಿಗೆ ಗೌರವ ಸಲ್ಲಿಸಿದರು.
ಶಾಸಕಿ ಬೋಹರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪಂಡರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಜನರ ಸಹಾಯದಿಂದ ದೀರ್ಘಕಾಲದಿಂದ ಘರ್ ವಾಪಸಿ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಈ ಅಭಿಯಾನವನ್ನು ಆರಂಭಿಸಲಾಯಿತು. ಇದುವರೆಗೆ ಈ ಭಾಗದ ವಿವಿಧ ಗ್ರಾಮಗಳ ಸುಮಾರು 750 ಜನರು ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ವಿವಿಧ ಗ್ರಾಮಗಳಿಂದ ಘರ್ ವಾಪಸಿ ಆದವರ ಸಂಖ್ಯೆ!
1. ನೇವುರ್ ಅರಣ್ಯ ಪ್ರದೇಶದ ಹತ್ತಿರದ ಗ್ರಾಮಗಳಿಂದ 115 ಜನರು
2. ಕುಯಿ-ಕುಕದುರ್ ಭಾಗದಿಂದ 70 ಜನರು
3. ದಮಗಡ ಗ್ರಾಮದಿಂದ 50 ಜನರು
4. ಕುಲ್ಹಿಡೋಂಗರಿ ಗ್ರಾಮದಿಂದ 140 ಜನರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ