ಹಿಂದೂ ಧಾರ್ಮ ಸ್ವೀಕರಿಸಿದ ಚರ್ಚ್ ಪಾದ್ರಿ!
ಜನರ ಕಾಲು ತೊಳೆದು ಹಿಂದೂ ಧರ್ಮಕ್ಕೆ ಸ್ವಾಗತ ಮಾಡಿದ ಭಾಜಪ ಶಾಸಕಿ ಭಾವನಾ ಬೋಹರಾ
(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಸೇರ್ಪಡೆ)

ರಾಯಪುರ (ಛತ್ತೀಸಗಢ) – ರಾಜ್ಯದ ಕವರ್ಧಾ ಜಿಲ್ಲೆಯ ಪಂಡರಿಯಾ ಭಾಗದಲ್ಲಿ ಸುಮಾರು 200 ಬಡ ಆದಿವಾಸಿಗಳು ಘರ್ ವಾಪಸಿ ಮಾಡಿದ್ದಾರೆ. ವಿಶೇಷವೆಂದರೆ, ಹಿಂದೂ ಧರ್ಮ ಸ್ವೀಕರಿಸಿದವರಲ್ಲಿ ಚರ್ಚ್ನ ಓರ್ವ ಪಾದ್ರಿ ಕೂಡ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಡರಿಯಾದ ಭಾಜಪ ಶಾಸಕಿ ಭಾವನಾ ಬೋಹರಾ ಉಪಸ್ಥಿತರಿದ್ದರು. ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಈ ಸಮಾರಂಭದಲ್ಲಿ ಆದಿವಾಸಿಗಳನ್ನು ಸನಾತನ ಧರ್ಮಕ್ಕೆ ಸ್ವಾಗತಿಸಿದರು. ಜನರ ಕಾಲುಗಳನ್ನು ತೊಳೆದು ಅವರಿಗೆ ಗೌರವ ಸಲ್ಲಿಸಿದರು.
ಶಾಸಕಿ ಬೋಹರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪಂಡರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಜನರ ಸಹಾಯದಿಂದ ದೀರ್ಘಕಾಲದಿಂದ ಘರ್ ವಾಪಸಿ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಈ ಅಭಿಯಾನವನ್ನು ಆರಂಭಿಸಲಾಯಿತು. ಇದುವರೆಗೆ ಈ ಭಾಗದ ವಿವಿಧ ಗ್ರಾಮಗಳ ಸುಮಾರು 750 ಜನರು ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ವಿವಿಧ ಗ್ರಾಮಗಳಿಂದ ಘರ್ ವಾಪಸಿ ಆದವರ ಸಂಖ್ಯೆ!
1. ನೇವುರ್ ಅರಣ್ಯ ಪ್ರದೇಶದ ಹತ್ತಿರದ ಗ್ರಾಮಗಳಿಂದ 115 ಜನರು
2. ಕುಯಿ-ಕುಕದುರ್ ಭಾಗದಿಂದ 70 ಜನರು
3. ದಮಗಡ ಗ್ರಾಮದಿಂದ 50 ಜನರು
4. ಕುಲ್ಹಿಡೋಂಗರಿ ಗ್ರಾಮದಿಂದ 140 ಜನರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ