ತಂದೆ ಸಹಿತ ೩ ಆರೋಪಿಗಳ ಬಂಧನ !
೨ ಹಿರಿಯ ಹೆಣ್ಣುಮಕ್ಕಳು ಹಿಂದೂ ಯುವಕರೊಂದಿಗೆ ವಿವಾಹವಾಗಿದ್ದಾರೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದೂ ಯುವಕನನ್ನು ಪ್ರೀತಿಸಿರುವ ಸಂಶಯದ ಮೇರೆಗೆ ಬಿಗ್ಗನ ಅನ್ಸಾರಿ ಎಂಬ ಮುಸಲ್ಮಾನ ವ್ಯಕ್ತಿಯು ತನ್ನ ಅಪ್ರಾಪ್ತ ಮಗಳ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಕ್ಷ್ಮಣಪುರಿಯ ಗೋಮತಿ ನಗರ ರೈಲುನಿಲ್ದಾಣದಲ್ಲಿ ರೈಲುಗಾಡಿಯಲ್ಲಿನ ಒಂದು ಪೆಟ್ಟಿಗೆಯಲ್ಲಿ ಸಿಕ್ಕಿದ ಮುಂಡದ ಆಧಾರದಲ್ಲಿ ಪೊಲೀಸರು ಅಪರಾಧವನ್ನು ಭೇದಿಸಿದರು. ಈ ಮೃತದೇಹವು ೧೫ ವರ್ಷದ ಶಬ್ಬಾ ಎಂಬ ಮುಸಲ್ಮಾನ ಹುಡುಗಿಯದ್ದಾಗಿತ್ತು. ಅವಳ ತಂದೆ ಬಿಗ್ಗನ ಅನ್ಸಾರಿಯು ತನ್ನ ಸಹೋದರಿ ಮತ್ತು ಭಾವನ ಸಹಾಯದಿಂದ ಶಬ್ಬಾಳ ಹತ್ಯೆಯನ್ನು ಮಾಡಿದ್ದನು. ಪೊಲೀಸರು ಮೂವರೂ ಆರೋಪಿಗಳನ್ನು ಕುಶಿನಗರದಿಂದ ಬಂಧಿಸಿದ್ದಾರೆ.
೧. ಈ ಕುರಿತು ಸಿಕ್ಕಿದ ಮಾಹಿತಿಗನುಸಾರ ತಂದೆ ಬಿಗ್ಗನ ಅನ್ಸಾರಿಗೆ, ತನ್ನ ಕಿರಿಯ ಮಗಳಿಗೆ ಓರ್ವ ಹಿಂದೂ ಯುವಕನೊಂದಿಗೆ ಪ್ರೇಮಸಂಬಂಧವಿದೆ, ಎಂದು ಸಂಶಯವಿತ್ತು. ಅವನ ೨ ಹಿರಿಯ ಹೆಣ್ಣುಮಕ್ಕಳು ಮೊದಲೇ ಹಿಂದೂ ಯುವಕರೊಂದಿಗೆ ವಿವಾಹವಾಗಿ ಹೋಗಿದ್ದರು. ತನ್ನ ಮೂರನೇ ಮಗಳೂ ಹಾಗೆ ಮಾಡುವಳು, ಎಂಬುದು ಅವನಿಗೆ ಒಪ್ಪಿಗೆ ಇರಲಿಲ್ಲ.
೨. ಬಿಗ್ಗನನು ಸಹೋದರಿ ನೂರಜಹಾಂ ಮತ್ತು ಭಾವ ಮೊಜಿಬುಲ್ಲಾನೊಂದಿಗೆ ಸೇರಿ ಮಗಳ ಹತ್ಯೆಯ ಸಂಚು ರೂಪಿಸಿದನು. ಅವರು ಮಗಳ ಹತ್ಯೆ ಮಾಡಿದರು ಮತ್ತು ಅವಳ ಮೃತದೇಹದ ೬ ತುಂಡುಗಳನ್ನು ಮಾಡಿದರು.
೩. ಗುರುತು ಸಿಗಬಾರದು ಎಂದು ಅವರು ಮೃತ ಮಗಳ ತಲೆಯನ್ನು ಕತ್ತರಿಸಿ ಕೆರೆಯಲ್ಲಿ ಎಸೆದರು, ಹಾಗೂ ಕೈ-ಕಾಲು ಮತ್ತು ಮುಂಡವನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿದರು ಮತ್ತು ಪೆಟ್ಟಿಗೆಯನ್ನು ‘ಛಪರಾ-ಗೋಮತಿನಗರ ಎಕ್ಸ್ ಪ್ರೆಸ್’ನ ಬೋಗಿಯಲ್ಲಿ ಇಟ್ಟರು.
೪. ತಮಕುಹಿ ರೋಡ್ ರೈಲುನಿಲ್ದಾಣದ ಫುಟೇಜ್ ನಲ್ಲಿ ಮೂವರೂ ಆರೋಪಿಗಳು ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡರು. ಪೊಲೀಸರು ಅನ್ಸಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಅವನು ಅಪರಾಧವನ್ನು ಒಪ್ಪಿಕೊಂಡನು. ಪೊಲೀಸರು ಕೆರೆಯಿಂದ ತಲೆಯ ಭಾಗ ಮತ್ತು ಹತ್ಯೆಗಾಗಿ ಬಳಸಿದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ.
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!