(ಲಿಟ್ಟೆ ಎಂದರೆ ‘ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ’ - ತಮಿಳು ರಾಷ್ಟ್ರ ವಿಮೋಚನಾ ಹುಲಿಗಳು)

ಚೆನ್ನೈ (ತಮಿಳುನಾಡು) – ಭಾರತದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ‘ಲಿಟ್ಟೆ’ ಮುಖ್ಯಸ್ಥ ವಿ. ಪ್ರಭಾಕರನ್ ಪುಣ್ಯತಿಥಿಯು ಮೇ 18 ರಂದು ಇತ್ತು. ಅವನಿಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2009 ರಲ್ಲಿ ಶ್ರೀಲಂಕಾದ ಮುಲ್ಲಿವಾಯಿಕ್ಕಲ್ ನಲ್ಲಿ ಶ್ರೀಲಂಕಾ ಸೈನ್ಯವು ಪ್ರಭಾಕರನ್ ನನ್ನು ಗುಂಡಿಕ್ಕಿ ಕೊಂದಿತ್ತು. ವಿಶೇಷವೆಂದರೆ ಭಾರತದಲ್ಲಿ ‘ಲಿಟ್ಟೆ’ ಸಂಘಟನೆಯನ್ನು ನಿಷೇಧಿಸಲಾಗಿದೆ. ರಾಜೀವ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದರು. ಇದೇ ಕಾಂಗ್ರೆಸ್ ಪಕ್ಷದ 5 ಶಾಸಕರು ಜೋಸೆಫ್ ವಿಜಯ ಅವರ ಸರಕಾರಕ್ಕೆ ಬೆಂಬಲ ನೀಡಿದ್ದಾರೆ. ಕಳೆದ ವಾರವಷ್ಟೇ ವಿಜಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು. ಅದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.
Tamil Nadu CM Joseph Vijay paid tribute to LTTE chief V. Prabhakaran on May 18, saying the memories of Mullivaikkal will remain alive and Tamils will always stand with their brethren across the sea.
Will the Congress, which is supporting Vijay’s government, clarify whether it… pic.twitter.com/VDsli5DrXq
— Sanatan Prabhat (@SanatanPrabhat) May 19, 2026
ಪ್ರಭಾಕರನ್ ಗಾಗಿ ವಿಜಯ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಶ್ರದ್ಧಾಂಜಲಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿಜಯ, ನಾವು ಮುಲ್ಲಿವಾಯಿಕ್ಕಲ್ ನ ನೆನಪುಗಳನ್ನು ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿಡುತ್ತೇವೆ. ಸಮುದ್ರದಾಚೆ ವಾಸಿಸುವ ನಮ್ಮ ತಮಿಳು ಸಹೋದರ-ಸಹೋದರಿಯರ ಹಕ್ಕುಗಳಿಗಾಗಿ ನಾವು ಯಾವಾಗಲೂ ಅವರೊಂದಿಗೆ ಜೊತೆಯಾಗಿ ನಿಲ್ಲುತ್ತೇವೆ ಎಂದು ಬರೆದಿದ್ದಾರೆ.
‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ದ ಮಹತ್ವವೇನು?1991 ರಲ್ಲಿ ಲಿಟ್ಟೆ ಸಂಘಟನೆಯು ರಾಜೀವ್ ಗಾಂಧಿಯವರ ಹತ್ಯೆಯನ್ನು ನಡೆಸಿತ್ತು. ಈ ಪ್ರಕರಣದಲ್ಲಿ ಪ್ರಭಾಕರನ್ ಮುಖ್ಯ ಆರೋಪಿಯಾಗಿದ್ದನು. ಜಗತ್ತಿನಾದ್ಯಂತ ಹರಡಿರುವ ತಮಿಳು ಸಮುದಾಯ ಮತ್ತು ಭಾರತದಲ್ಲಿ ವಾಸಿಸುವ ತಮಿಳರು ಮೇ 18 ರಂದು ‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ ಅಂದರೆ ‘ತಮಿಳು ಜನಾಂಗೀಯ ಹತ್ಯೆ ಸ್ಮರಣ ದಿನ’ ಎಂದು ಆಚರಿಸುತ್ತಾರೆ. 2009 ರಲ್ಲಿ ಶ್ರೀಲಂಕಾದ ಅಂತರ್ಯುದ್ಧವು ಕೊನೆಗೊಂಡಿತು. ಈ ದಿನದಂದು ಮೃತಪಟ್ಟ ಸಹಸ್ರಾರು ತಮಿಳು ನಾಗರಿಕರನ್ನು ಸ್ಮರಿಸಲಾಗುತ್ತದೆ. ಮುಲ್ಲಿವಾಯಿಕ್ಕಲ್ ಎಂಬ ಕರಾವಳಿ ಹಳ್ಳಿಯ ಮೇಲೆ ಶ್ರೀಲಂಕಾ ಸೈನ್ಯವು ಕೊನೆಯ ಬಾರಿ ತೀವ್ರ ಪ್ರಹಾರ ನಡೆಸಿತ್ತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಯುದ್ಧದ ಈ ಅಂತಿಮ ಹಂತದಲ್ಲಿ ಸುಮಾರು 40 ರಿಂದ 70 ಸಹಸ್ರ ತಮಿಳು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಶ್ರೀಲಂಕಾ ಸೈನ್ಯವು ನಾಗರಿಕರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ಎಸಗಿತ್ತು. ಆದ್ದರಿಂದ ತಮಿಳು ಹಿಂದೂಗಳು ಈ ದಿನವನ್ನು ‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ ಎಂದು ಆಚರಿಸುತ್ತಾರೆ. |
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು